ಹೊಂಡವಾಗಿರುವ ರಸ್ತೆ ಮಧ್ಯೆ ಬಾಳೆಗಿಡ ನೆಟ್ಟ ಸಾವ೯ಜನಿಕರು
ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ಮೂಡುಬಿದಿರೆ- ಧಮ೯ಸ್ಥಳಕ್ಕೆ ಹಾದು ಹೋಗುವ ಮಾರೂರಿನ ಜೈ ಭವಾನಿ ಮಂದಿರದ ಬಳಿ ಮಧ್ಯ ರಸ್ತೆಯಲ್ಲಿ ಹೊಂಡವೊಂದು ಸೃಷ್ಟಿಯಾಗಿದ್ದು ಇದಕ್ಕೆ ಸ್ಥಳೀಯರು ಬಾಳೆ ಗಿಡಗಳನ್ನು ನೆಟ್ಟು ವಾಹನ ಸವಾರರಿಗೆ ಜಾಗೃತಿಯನ್ನು ಮೂಡಿಸಿದ್ದಾರೆ ಹಾಗೂ ಮಳೆಯ ಪ್ರಭಾವದಿಂದಾಗಿ ತಮ್ಮ ವ್ಯಾಪ್ತಿಯ ಹೆಚ್ಚಿನ ರಸ್ತೆಗಳು ಹೊಂಡಗಳಿಂದ ತುಂಬಿಕೊಂಡಿದ್ದು ಸೂಕ್ತ ವ್ಯವಸ್ಥೆಯನ್ನು ಆದಷ್ಟು ಬೇಗ ಕಲ್ಪಿಸಿ ವಾಹನ ಅಪಘಾತಗಳಿಂದ ಪ್ರಾಣಾಪಾಯವಾಗುವುದನ್ನು ತಪ್ಪಿಸಿ ಎಂಬ ಸಂದೇಶವನ್ನು ಜನಪ್ರತಿನಿಧಿಗಳಿಗೆ ನೀಡಿದಂತಿದೆ.
0 Comments