ಕಡಂದಲೆ ಶಾಂಭವಿ ನದಿಯಲ್ಲಿ ದನದ ತಲೆಗಳು ಪತ್ತೆ
ಮೂಡುಬಿದಿರೆ: ತಾಲೂಕಿನ ಕಡಂದಲೆ ಶಾಂಭವೀ ನದಿಯಲ್ಲಿ ತೇಲುತ್ತಿದ್ದ ದನದ ತಲೆಗಳನ್ನು ಸ್ಥಳೀಯರು ಬುಧವಾರ ಬೆಳಿಗ್ಗೆ ಪತ್ತೆ ಮಾಡಿದ್ದಾರೆ.
ದನವನ್ನು ಕೊಂದು ಮಾಸ ಮಾಡಿದ ನಂತರ ಅದರ ತಲೆಗಳನ್ನು ಮತ್ತು ಕರುಳನ್ನು ನದಿಗೆ ತಂದು ಹಾಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಸಾಯಿ ಖಾನೆ?
ಈ ಪರಿಸರದಲ್ಲಿ ಅಕ್ರಮ ಕಸಾಯಿ ಖಾನೆ ಇದೆಯೇ ಎಂಬ ಪ್ರಶ್ನೆ ಈಗ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ
ನಿನ್ನೆ ದನ ಹಾಗೂ ಕರುವನ್ನು ಹತ್ಯೆ ಮಾಡಿ ಬಳಿಕ ಅದರ ತಲೆಗಳನ್ನು ಈ ನದಿಗೆ ಹಾಕಲಾಗಿದೆ. ಈ ಪರಿಸರದಲ್ಲಿ ಅಶಾಂತಿ ಕದಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
0 Comments