ಕಾಂಗ್ರೆಸ್ ನ ಅಭ್ಯರ್ಥಿ ಗೆಲುವಿಗೆ ಪಂಚ ಗ್ಯಾರಂಟಿಯೇ ಸಾಕ್ಷಿ

ಜಾಹೀರಾತು/Advertisment
ಜಾಹೀರಾತು/Advertisment

 ಕಾಂಗ್ರೆಸ್ ನ ಅಭ್ಯರ್ಥಿ ಗೆಲುವಿಗೆ ಪಂಚ ಗ್ಯಾರಂಟಿಯೇ ಸಾಕ್ಷಿ

 

ಮೂಡುಬಿದಿರೆ: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯನ್ನು ಹೆಚ್ಚು ಟೀಕಿಸಿದವರು ದಕ್ಷಿಣ ಕನ್ನಡ ಜಿಲ್ಲೆಯವರು. ಈಗ ಗೃಹಲಕ್ಷ್ಮಿ ಯೋಜನೆಗೆ ಹೆಚ್ಚು ಅರ್ಜಿ ಸಲ್ಲಿಸಿದವರು ಇದೇ ಜಿಲ್ಲೆಯವರು ಹಾಗೂ ಜಿಲ್ಲೆಯಲ್ಲಿ ಶಕ್ತಿ ಯೋಜನೆಯ ಹೆಚ್ಚು ಫಲಾನುಭವಿಗಳು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಜನರು ಆದ್ದರಿಂದ ಸರಕಾರದ ಪಂಚ ಗ್ಯಾರಂಟಿಗಳು ಜನರಲ್ಲಿ ಕಾಂಗ್ರೆಸ್ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಿದೆ ಎಂದು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಮಿಥುನ್ ರೈ ಹೇಳಿದರು.


ಅವರು ಬುಧವಾರ ಮೂಡುಬಿದಿರೆಯ ಖಾಸಗಿ ಹೊಟೇಲ್ ನಲ್ಲಿ  ಸುದ್ದಿಗೋಷ್ಠಿ ನಡೆಸಿ  ಮಾತನಾಡಿದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ  ಅಭಿವೃದ್ಧಿ ಶೂನ್ಯವಾಗಿದೆ ನಂ 1 ಸಂಸದರನಿಸಿಕೊಂಡವರನ್ನೂ ಇದೇ ಕಾರಣಕ್ಕೆ ಅವರ ಪಕ್ಷದವರು ಈ ಬಾರಿ ಬದಲಾಯಿಸಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ಪಡೆಯುವುದು ಸಾಧ್ಯವಿಲ್ಲ ಎಂಬುದನ್ನು ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಜನ ಸಾಬೀತು ಮಾಡಿದ್ದಾರೆ. ಮಾತೆದ್ದಿದರೆ ಬಿಜೆಪಿಯವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ ಕಾರ್ಕಳದ ಪರುಶುರಾಮನ ಪ್ರತಿಮೆಗೆ ಅವಮಾನ ಮಾಡಿದ್ದು ಇದೇ ಬಿಜೆಪಿಯವರಲ್ಲವೆ ಎಂದು ಪ್ರಶ್ನಿಸಿದ ಅವರು ಬಿಜೆಪಿಯ ಹಿಂದುತ್ವ ಸಾಚ ಅಲ್ಲ ಎಂದರು .


ಎಂಎಲ್‌ಎ ಚುನಾವಣೆ ಸಂದರ್ಭ ಕಾಂಗ್ರೆಸ್ ಮೊದಲಿನಿಂದಲು ಹಿಂದುಳಿದ ವರ್ಗದವರಿಗೆ ಶಕ್ತಿ ನೀಡುತ್ತಾ ಬಂದಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರ ಗರಡಿಯಲ್ಲಿ ಪಳಗಿದ ಹಿಂದುಳಿದ ನಾಯಕ ಆರ್.ಪದ್ಮರಾಜ್ ಜನ ಸಾಮಾನ್ಯರೊಂದಿಗೆ ಬೆರೆಯಬಲ್ಲ ವ್ಯಕ್ತಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಉತ್ತಮ ವಾತಾವರಣ ಸೃಷ್ಟಿಯಾಗಿರುವುದರಿಂದ ನಮ್ಮ ಅಭ್ಯರ್ಥಿ  ಆಯ್ಕೆಯಾಗುತ್ತಾರೆಂಬ  ವಿಶ್ವಾಸವಿದೆ ಎಂದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ವಲೇರಿಯನ್ ಸಿಕ್ವೇರಾ, ಕ್ಷೇತ್ರದ ಚುನಾವಣಾ ಉಸ್ತುವಾರಿ ವಸಂತ ಬೆರ್ನಾಡ್ ೯, ಕೆಪಿಸಿಸಿ ಸದಸ್ಯ ಚಂದ್ರಹಾಸ್ ಸನಿಲ್, ಮುಖಂಡರಾದ ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ಪ್ರವೀಣ್ ಕುಮಾರ್ ಶಿರ್ತಾಡಿ, ರಾಜೇಶ್ ಕಡಲಕರೆ ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮಹಮ್ಮದ್  ಅಸ್ಲಂ ಮತ್ತಿತರರು ಉಪಸ್ತಿತರಿದ್ದರು.

Post a Comment

0 Comments