ನ್ಯೂ ವೈಬ್ರೆಂಟ್ ಪಿ ಯು ಕಾಲೇಜಿನಲ್ಲಿ ವಾರ್ಷಿಕೋತ್ಸವದ ಸಂಭ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ನ್ಯೂ  ವೈಬ್ರೆಂಟ್ ಪಿ ಯು ಕಾಲೇಜಿನಲ್ಲಿ  ವಾರ್ಷಿಕೋತ್ಸವದ ಸಂಭ್ರಮ 

 ಮೂಡಬಿದಿರೆ: ಇಲ್ಲಿನ ಕಲ್ಲಬೆಟ್ಟಿನಲ್ಲಿರುವ  ನ್ಯೂ ವೈಬ್ರೆಂಟ್ ಪಿ ಯು ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮವು  ಶನಿವಾರದಂದು ಪಡುಮಾರ್ನಾಡಿನ  ಜಿ.ಕೆ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. 


 ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿರುವ ಎನ್ ಐ ಟಿ ಪುದುಚೇರಿಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಅಮೃತ್ ಭೀಡೆ ಅವರಿಗೆ  2024-25 ನೇ ಸಾಲಿನ 'ವೈಬ್ರೆಂಟ್ ವಿಜ್ಞಾನ ರತ್ನ -2024' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು." 

 ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಧಾರಿತ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿನ ಒತ್ತಡ ನೀವಾರಿಸುವಲ್ಲಿ 

ಸಹಕಾರಿಯಗಬಲ್ಲದು.  ಕೇವಲ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸಾಧನೆಯ ಕ್ಷೇತ್ರ ಮಾತ್ರವಲ್ಲ. ಶಿಕ್ಷಕ ವೃತ್ತಿಯಲ್ಲೂ ಸಾಧನೆಯನ್ನು ಮಾಡಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಿದಾಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ. " ಎಂಬ ಅಭಿಪ್ರಾಯಪಟ್ಟರು.

 

ಟ್ರಸ್ಟಿ , ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜು ಟ್ರಷ್ಟಿ, ಅಧ್ಯಕ್ಷ  ಸುಭಾಶ್ ಝ ಅಧ್ಯಕ್ಷತೆ ವಹಿಸಿದ್ದರು.

 ಅತಿಥಿಗಳಾಗಿ ಆಗಮಿಸಿದ್ದ ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು  "  ಮೌಲ್ಯಗಳನ್ನು ಕಲಿಯುವುದರ ಜೊತೆಗೆ ಅವುಗಳನ್ನು  ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾಧನೆಯ ಪಥದತ್ತ ಸಾಗಲು ಸಾಧ್ಯ " ಎಂದರು.


 ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಹ ಶ್ರೀಯತ ಸಿ.ಡಿ.ಜಯಣ್ಣ ಅವರು  " ಶಿಕ್ಷಣ ಕ್ಷೇತ್ರಕ್ಕೆ ಹಲವು ದಾಖಲೆಗಳನ್ನು ನೀಡಿ, ಸುವರ್ಣಾಕ್ಷರಗಳಲ್ಲಿ ಐತಿಹಾಸಿಕ ದಾಖಲೆಯನ್ನು ಮಾಡಿರುವ ಸಂಸ್ಥೆ,ನ್ಯೂ ವೈಬ್ರೆಂಟ್ ರಾಷ್ಟದ ಇತರೆ ಸಂಸ್ಥೆಗಳಿಗೆ ಮಾದರಿಯಾಗಲಿ " ಎಂದು ಹಾರೈಸಿದರು.

ಉದ್ಯಮಿ ಶ್ರೀಪತಿ ಭಟ್ ಅವರು ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಮತ್ತು ಟ್ರಷ್ಟಿ ಡಾ. ವೆಂಕಟೇಶ್ ನಾಯಕ್ ರವರು ವಾರ್ಷಿಕ ವರದಿಯನ್ನು ವಾಚಿಸಿದರು. ಕಾ ಅಧ್ಯಕ್ಷತೆಯನ್ನು ವಹಿಸಿದ್ದ, ಟ್ರಸ್ಟಿಯು ಆಗಿರುವಂತಹ ಶ್ರೀಯತ  "ವಿದ್ಯಾರ್ಥಿಗಳ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸುವುದೇ ನಮ್ಮ ಸಂಸ್ಥೆಯ ಮೂಲ ಉದ್ದೇಶವೆಂದು " ತಿಳಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ,  ಡಾ. ಎಸ್. ಎನ್. ವೆಂಕಟೇಶ್ ನಾಯಕ್, ಚಂದ್ರಶೇಖರ್ ರಾಜೇ ಅರಸ್,ಶರತ್ ಗೋರೆ, ಮಹಮ್ಮದ್ ಭಾಷಾ, ಯೋಗೇಶ್ ಬೆಡೇಕರ್ ಮತ್ತು ಅಮರೇಶ್ ರವರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ರಾಗಿಣಿಯವರು ಕಾರ್ಯಕ್ರಮಕ್ಕೆ ಆಗಮಿಸಿರುವ ಅತಿಥಿಗಳನ್ನು ಸ್ವಾಗತಿಸಿದರು.

 ಉಪನ್ಯಾಸಕರಾಗಿರವಂತಹ ಹರೀಶ್ ನಂಬಿಯರ್ ಮತ್ತು ವರ್ಷ ಕಾಮತ್  ಕಾರ್ಯಕ್ರಮವನ್ನು ನಿರೂಪಿಸಿದರು. ಉಪ ಪ್ರಾಂಶುಪಾಲ ಡಾ. ರಶ್ಮಿ ರಾಜೇ ಅರಸ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Post a Comment

0 Comments