ನೇತಾಜಿ ಬ್ರಿಗೇಡ್ 5ನೇ ವರ್ಷದ ವಾರ್ಷಿಕೋತ್ಸವ *ಜನಸೇವೆಯ ಮೂಲಕ ಸಾರ್ಥಕತೆ: ಕರಿಂಜೆ ಶ್ರೀ

ಜಾಹೀರಾತು/Advertisment
ಜಾಹೀರಾತು/Advertisment

 ನೇತಾಜಿ ಬ್ರಿಗೇಡ್ 5ನೇ ವರ್ಷದ ವಾರ್ಷಿಕೋತ್ಸವ 

*ಜನಸೇವೆಯ ಮೂಲಕ ಸಾರ್ಥಕತೆ: ಕರಿಂಜೆ ಶ್ರೀ

ಮೂಡುಬಿದಿರೆ: ಸಂಸ್ಥೆಯನ್ನು ಹುಟ್ಟು ಹಾಕುವುದು ಮಾತ್ರ ಅಲ್ಲ. ಅದರ ಉದ್ದೇಶವನ್ನು ಜನರಿಗೆ ಮುಟ್ಟಿಸಿ ಅವರಿಂದ ಪ್ರೀತಿ ವಿಶ್ವಾಸವನ್ನು ಗಳಿಸಿ  ಜನಸೇವೆಯ ಮೂಲಕ ಮೆಚ್ಚುಗೆ ಪಡೆಯುವುದೇ ಸಾರ್ಥಕತೆ ಎಂದು ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ನುಡಿದರು.


ಅವರು ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಇದರ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಜೀವಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಇವುಗಳ  ಸಹಯೋಗದಲ್ಲಿ ಸಮಾಜ ಮಂದಿರದಲ್ಲಿ ಏರ್ಪಡಿಸಿದ್ದ ಉಚಿತ ವೈದ್ಯಕೀಯ ಶಿಬಿರ, ಚಿತ್ರಕಲಾ ಸ್ಪರ್ಧೆ, ಅಂಗಾಂಗ ದಾನ ಮಾಹಿತಿ ಮತ್ತು ನೋಂದಾವಣೆ, ಸಹಾಯಧನ ವಿತರಣೆ, ಸನ್ಮಾನ  ಹಾಗೂ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ಮಾಡಿದರು.

  40 ವರ್ಷ ದ ದಾಟಿದ ನಂತರ ಬರುತ್ತಿದ್ದ ಕಾಯಿಲೆಗಳು ಇಂದು ಸಣ್ಣ ವಯಸ್ಸಿನಲ್ಲಿಯೇ ನಮ್ಮನ್ನು ಆಕ್ರಮಿಸುತಿದೆ ಇಂತಹ ವೈಪರಿತ್ಯವನ್ನು ತಡೆಯಲು ಆರೋಗ್ಯ ತಪಾಸಣೆಗಳು ಅಗತ್ಯ. ನೇತ್ರದಾನ, ಅಂಗಾಂಗದಾನದಂತಹ ಉತ್ತಮ ಕೆಲಸಗಳ ಬಗ್ಗೆ ಜಾಗೃತಿ ಹಾಗೂ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿರುವುದು ಉತ್ತಮ ಕೆಲಸ ಎಂದು ನೇತಾಜಿ ಬ್ರಿಗೇಡ್ ನ್ನು ಶ್ಲಾಘನೀಯ ಎಂದರು.

 ಶಾಸಕ ಉಮಾನಾಥ ಎ.ಕೋಟ್ಯಾನ್  ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

 ನೇತಾಜಿ ಬ್ರಿಗೇಡ್ ನ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 

ಪುರಸಭಾ ಸದಸ್ಯ 

ರಾಜೇಶ್ ನಾಯ್ಕ್ , ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ವಿಹಿಂಪದ ತಾಲೂಕು ಪ್ರಮುಖ್ ಸುಚೇತನ್ ಜೈನ್, ಜೀವನ ಸಾರ್ಥಕತೆಯ ಪದ್ಮಾವತಿ, ವೈದ್ಯಾಧಿಕಾರಿ ಅತಿಥಿಗಳಾಗಿ ಭಾಗವಹಿಸಿದ್ದರು. ನೇತಾಜಿ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ ರಾಹುಲ್ ಕುಲಾಲ್ ಸ್ವಾಗತಿಸಿದರು. ರಮ್ಯ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ್ ವಂದಿಸಿದರು.


  .

Post a Comment

0 Comments