ಪಂಚಶಕ್ತಿ ವಿವಿಧ್ದೋದ್ದೇಶ ಸೌಹಾರ್ದ ಸಹಕಾರಿ
ಅಧ್ಯಕ್ಷರಾಗಿ ರಂಜಿತ್ ಪೂಜಾರಿ ಪುನಾರಾಯ್ಕೆ
ಮೂಡುಬಿದಿರೆ: ಇಲ್ಲಿನ ಶ್ರೀ ಪಂಚಶಕ್ತಿ ವಿವಿಧ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ರಂಜಿತ್ ಪೂಜಾರಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಂಕರನಾರಾಯಣ ಭಟ್ ಅವರು ಕೂಡಾ ಅವಿರೋಧವಾಗಿ ಮುಂದಿನ 5 ವರ್ಷಕ್ಕೆ ಆಯ್ಕೆಯಾಗಿದ್ದಾರೆ. ಸುರೇಶ್ ಕೆ. ಪೂಜಾರಿ ಎಂ., ಗೋಪಾಲ್ ಶೆಟ್ಟಿಗಾರ್, ರತ್ನಾಕರ ಪೂಜಾರಿ, ರವೀಂದ್ರ ಕರ್ಕೇರ, ಶರತ್ .ಜೆ. ಶೆಟ್ಟಿ, ರಾಜೇಂದ್ರ ಬಿ., ರಮೇಶ್.ಎಸ್. ಶೆಟ್ಟಿ, ನಾಗೇಶ್ ನಾಯ್ಕ, ಉಷಾ, ಹಾಗೂ ಮಿನಾಕ್ಷಿ ಎಸ್. ಅಂಚನ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಲೆಕ್ಕಪರಿಶೋಧನ ಅಧಿಕಾರಿ ನವೀನ್ ಕುಮಾರ್ ಎಂ.ಎಸ್. ಚುನಾವಣಾ ಪ್ರಕ್ರಿಯೆಯಲ್ಲಿ ರಿಟರ್ನಿಂಗ್ ಅಧಿಕಾರಿಯಾಗಿದ್ದರು.
0 Comments