ನಿಡ್ಡೋಡಿ ಚರ್ಚಿನಲ್ಲಿ ಸೌಹಾರ್ದ ಕ್ರಿಸ್ಮಸ್ ಆಚರಣೆ
ಮೂಡುಬಿದಿರೆ: ನಿಡ್ಡೋಡಿ ಸಂತ ಥೆರಜಾಮ್ಮ ಚರ್ಚ್, ಕಲ್ಲಮುಂಡ್ಕೂರುನಲ್ಲಿ ಚರ್ಚ್ ಪಾಲನ ಸಮಿತಿ , ಅಂತರ್ ಧರ್ಮಿಯ ಸಂವಾದ ಮತ್ತು ಯುವ ಆಯೋಗದ ಜಂಟಿ ಆಶ್ರಯದ ಸೌಹಾರ್ದ ಕ್ರಿಸ್ಮಸ್ 2023 ಅನ್ನು ಭಾನುವಾರ ಆಚರಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾಜಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಮುಖ್ಯ ಅತಿಥಿಯಾಗಿದ್ದರು.
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ಸಿಲ್ವನ್ ಡಿಸೋಜ, ಕಲಾವಿದ ಸದಾಶಿವ ಪೂಜಾರಿ, ಅರದಿರಲಿ ಬದುಕು ಆರಾಧನಾ ಸಂಸ್ಥೆಯ ಪದ್ಮಶ್ರೀ ಭಟ್, ರಾಷ್ಟç ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಲೆರೊಯ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು.
ಜಾನ್ ಕಾರ್ಡೋಜ, ಭಗಿನಿ ಸೆವ್ರಿನ್ ಫೆರ್ನಾಂಡಿಸ್, ಕಿಶೋರ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಚರ್ಚಿನ ಧರ್ಮಗುರು ಫಾ.ಡೇನಿಸ್ ಸುವಾರಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಜೀವನ್ ಕ್ರಾಸ್ತಾ ಸನ್ಮಾನ ಕಾರ್ಯಕ್ರಮ ಸಂಯೋಜಿಸಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ವಂದಿಸಿದರು. ರೇಶ್ಮಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕ್ರಿಸ್ಮಸ್ ಕ್ಯಾರಲ್ಸ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
0 Comments