ಉಡುಪಿ ನೇಜಾರಿನಲ್ಲಿ ಹತ್ಯೆಗೊಳಗಾದ ನಾಲ್ವರು: ಆರೋಪಿಗಾಗಿ ತೀವ್ರ ಹುಡುಕಾಟ

ಜಾಹೀರಾತು/Advertisment
ಜಾಹೀರಾತು/Advertisment

 ಉಡುಪಿ ನೇಜಾರಿನಲ್ಲಿ ಹತ್ಯೆಗೊಳಗಾದ ನಾಲ್ವರು: ಆರೋಪಿಗಾಗಿ ತೀವ್ರ ಹುಡುಕಾಟ

ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣದ ತನಿಖೆ ತೀವ್ರಗೊಂಡಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಘಟನೆಯಿಂದ ಜನರು ಭಯಭೀತರಾಗಿದ್ದಾರೆ. ನೂರಾರು ಮಂದಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದು ಪೊಲೀಸರು ಬಿಗಿ ಭದ್ರತೆ ಹಮ್ಮಿಕೊಂಡಿದ್ದಾರೆ.

ಮೃತರಲ್ಲಿ ಹಸೀನಾ ಗೃಹಿಣಿಯಾಗಿದ್ದು ಅಫ್ನಾನ್ ಏರ್ ಇಂಡಿಯಾ ಸಂಸ್ಥೆಯಲ್ಲಿ ಗಗನ ಸಖಯಾಗಿ ಸೇವೆ ಸಲ್ಲಿಸುತ್ತಿದ್ದರು. ಆಯ್ನಾಝ್ (21) ಬಿಕಾಮ್ ಲಾಜಿಸ್ಟಿಕ್ ಕಲಿಯುತ್ತಿದ್ದು, ಅಸೀಮ್ (13) ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

ಇನ್ನೊರ್ವ ಮಗ ಇಂಡಿಗೋ ಸಂಸ್ಥೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.


ವಿಧಿ ವಿಜ್ಞಾನ ಸಂಸ್ಥೆ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಶ್ವಾನ ದಳ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ಸಿಸಿಟಿವಿ ದೃಶ್ಯಾವಳಿಗಳು ಪರಿಶೀಲನೆ ನಡೆಸಲಾಗುತ್ತಿದ್ದು ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವ ಸಾಧ್ಯತೆ ಇದೆ.

Post a Comment

0 Comments