ನ.12: ಜವನೆರ್ ಬೆದ್ರದಿಂದ ಗೂಡುದೀಪ ಸ್ಪರ್ಧೆ ಮತ್ತು ಯೋಧ ನಮನ

ಜಾಹೀರಾತು/Advertisment
ಜಾಹೀರಾತು/Advertisment

 ನ.12: ಜವನೆರ್ ಬೆದ್ರದಿಂದ ಗೂಡುದೀಪ ಸ್ಪರ್ಧೆ ಮತ್ತು ಯೋಧ ನಮನ



ಮೂಡುಬಿದಿರೆ: ದೀಪಾವಳಿ ಸಂಭ್ರಮದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ (ರಿ.) ವತಿಯಿಂದ  ನವೆಂಬರ್ 12 ರಂದು ಸಂಜೆ 4.00 ಗಂಟೆಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೂಡು ದೀಪ ಸ್ಪರ್ಧೆ  ಹಾಗೂ ಯೋಧ ನಮನ , ದೇವರ ನಾಮ (ಭಜನೆ), ಪದಗ್ರಹಣ 2023-24 ಕಾರ್ಯಕ್ರಮವು ನಡೆಯಲಿದೆ ಎಂದು ಜವನೆರ್ ಬೆದ್ರ ಸಂಘಟನೆಯ ಸಂಸ್ಥಾಪಕ   ಅಮರಕೋಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ವಿಜೇತರಿಗೆ ಬಹುಮಾನಗಳು : 


ಪ್ರಥಮ ಮತ್ತು ದ್ವಿತೀಯಕ್ಕೆ ನಗದು ಮತ್ತು ಪ್ರಶಸ್ತಿ ಪತ್ರ.



ಎರಡು ಸಮಾಧಾನಕರ ಬಹುಮಾನ ವಿತರಿಸಲಾಗುವುದು.


ವಿಶೇಷ ಸೂಚನೆ


ಸ್ಪರ್ಧೆ ಸಂಜೆ 4 ಗಂಟೆಯಿ೦ದ ಆರಂಭವಾಗುತ್ತದೆ (ಸಂಜೆ 5 ಗಂಟೆ ಒಳಗೆ ಗೂಡು ದೀಪವನ್ನು ನಿಗದಿಪಡಿಸಿದ ಜಾಗದಲ್ಲಿ ಅಳವಡಿಸಬೇಕು).


ಈ ಸ್ಪರ್ಧೆಯಲ್ಲಿ ಭಾಗವಹಿಸಲು 8 -11- 2023ರ ಸಾಯಂಕಾಲ 6 ಗಂಟೆಯ ಒಳಗೆ ತಮ್ಮ ಹೆಸರನ್ನು ನೊಂದಾಯಿಸಬೇಕು.



1 ಪ್ರಥಮ, ದ್ವಿತೀಯ ಹಾಗೂ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು.


ನಿಯಮಗಳು: ಸಾಂಪ್ರದಾಯಿಕ ಗೂಡುದೀಪ – ಸೀಮೆ ಕೋಲಿನ ಅಷ್ಟಪಟ್ಟಿ ಗೂಡುದೀಪಕ್ಕೆ ಕಿವಿ, ರೆಕ್ಕೆ, ಬಾಲ ಇರುವ ಹಾಗೆ, ಕಲರ್ ಪೇಪರ್ ಮಾತ್ರ ಬಳಕೆ, ಒಳಗೆ ಕಡ್ಡಾಯವಾಗಿ ಬಲ್ಬ್ ಅಳವಡಿಸಿ ಹೊರಗೆ ಬೆಳಕು ಚೆಲ್ಲಬೇಕು ಮತ್ತು ತೂಗು ಹಾಕಬೇಕು.


ಆಧುನಿಕ ಗೂಡುದೀಪ – ಅಷ್ಟಪಟ್ಟಿ ಗೂಡುದೀಪ ಇರಬೇಕು, ಯಾವುದೇ ವಸ್ತು ಉಪಯೋಗಿಸಬಹುದು, ತೂಗು ಹಾಕಬೇಕು.


ಗೂಡುದೀಪಕ್ಕೆ ಬಲ್ಬ್ ವಯರ್ ಸ್ಪರ್ಧಿಗಳೇ ತರತಕ್ಕದ್ದು.


ಅತೀ ಕಡಿಮೆ ಖರ್ಚಿನ ಕ್ರಿಯಾತ್ಮಕ ಗೂಡುದೀಪಕ್ಕೆ ಪ್ರಾಶಸ್ತ್ಯ ಎಂದು ತಿಳಿಸಿದ್ದಾರೆ.

Post a Comment

0 Comments