ನೆಲ್ಲಿಕಾರು ಗ್ರಾಮ ಪಂಚಾಯತ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ

 ಮೂಡುಬಿದಿರೆ: ತಾಲೂಕಿನ   ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ನೆಲ್ಲಿಕಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ  ಗ್ರಾ. ಪಂ.ಅಧ್ಯಕ್ಷ ಉದಯ ಪೂಜಾರಿ ಉದ್ಘಾಟಿಸಿದರು.



ನಂತರ ಮಾತನಾಡಿದ ಅವರು ಸರಕಾರದ ಉತ್ತಮವಾದ ಯೋಜನೆ ಇದಾಗಿದ್ದು ಮಹಿಳೆಯರಿಗೆ ಆರ್ಥಿಕ ಭದ್ರತೆಯೊಂದಿಗೆ ಸ್ವಾವಲಂಬಿ ಜೀವನಕ್ಕೆ ಮಾರ್ಗವಾಗಿದೆ ಎಂದರು. 

ಉಪಾಧ್ಯಕ್ಷೆ ಸುಶೀಲ, ಸರ್ವ ಸದಸ್ಯರು,ಕಾರ್ಯದರ್ಶಿ ದಾಮೋದರ ನೋಡಲ್ ಅಧಿಕಾರಿ ಪಶು ಸಂಗೋಪನ ಇಲಾಖೆಯ ಮಧುಸೂಧನ್ ಉಪಸ್ಥಿತರಿದ್ದರು.

  ಸದಸ್ಯರಾದ ಶಶಿಧರ ಎಂ ರವರು ಪ್ರಾಸ್ತಾವಿಕ ಮಾತನಾಡಿ ಯೋಜನೆಯ ಬಗ್ಗೆ ತಿಳಿಸಿದರು.

   ಸುಮಾರು 250 ಕ್ಕೂ ಅಧಿಕ  ಗೃಹ ಲಕ್ಷ್ಮಿ ಫಲಾನುಭವಿಗಳು ಅಂಗನವಾಡಿ ಕಾರ್ಯಕರ್ತರು ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿ,  ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

Advertisement