ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವ 10 ದಿನ ವೈಭವದಿಂದ ಜರಗಿತು*

ಜಾಹೀರಾತು/Advertisment
ಜಾಹೀರಾತು/Advertisment

 *ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವ 10 ದಿನ ವೈಭವದಿಂದ ಜರಗಿತು* 




ಬೆಳ್ತಂಗಡಿ : ಇತಿಹಾಸ ಪ್ರಸಿದ್ದ  ಬೆಳ್ತಂಗಡಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವು ಪೆಬ್ರವರಿ 13 ರಿಂದ ಪೆಬ್ರವರಿ 22 ರ ತನಕ ವೈಭವದಿಂದ ಜರಗಿತು.

ಪ್ರಶ್ನಾಚಿಂತನ,ಗೊನೆ ಮುಹೂರ್ತ, ನವಕಕಲಶ,ಪ್ರಸನ್ನ ಪೂಜೆ,ಸಾಮೂಹಿಕ ನವಗ್ರಹಶಾಂತಿ,ನಾಗ ತನುತರ್ಪಣ,ಸಾಮೂಹಿಕ ಶನಿಪೂಜೆ, ವಸಂತಕಟ್ಟೆ ಪೂಜೆ, ಮಹಾರಂಗ ಪೂಜೆ, ಗಣಹೋಮ, ಶತರುದ್ರಾಭಿಷೇಕ, ಪಲ್ಲಕಿ ಉತ್ಸವ, ಚಂದ್ರಮಂಡಲೋತ್ಸವ,ಅಶ್ವಥಕಟ್ಟೆ ಪೂಜೆ,  ಶ್ರೀ ಮನ್ಮಹಾರಥೋತ್ಸವ ‌, ಶ್ರೀ ದೇವರ ಬೀದಿ ಸವಾರಿ, ಕಟ್ಟೆ ಪೂಜೆ, ಅವಭೃತ ಸ್ನಾನ , ಧರ್ಮದೈವಗಳ  ನೇಮೋತ್ಸವ, ಸಹಿತ  ಮುಂತಾದ ಧಾರ್ಮಿಕ ಕಾರ್ಯಕ್ರಮಗಳು 10 ದಿನಗಳ ಕಾಲ ವೈಭವದಿಂದ ನಡೆಯಿತು. 

ಈ ಸಂದರ್ಭದಲ್ಲಿ  ಅನುವಂಶಿಕ ಆಡಳಿತ ಮೊಕ್ತೇಸರಾದ  ಕೆಲ್ಲಗುತ್ತು ಸಬ್ರಬೈಲು ಜಯವರ್ಮರಾಜ ಬಳ್ಳಾಲ್  ಹಾಗೂ  ಸಹೋದರ, ಸಹೋದರಿಯರು ಮತ್ತು   ಕುಟುಂಬಸ್ಥರು, ಊರ ಹಾಗೂ ಪರ ಊರಿನ ಭಕ್ತವೃಂದವರು ಸಹಸ್ರಾರು  ಸಂಖ್ಯೆಯಲ್ಲಿ ಭಾಗವಹಿಸಿ  ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರು

Post a Comment

0 Comments