ಎಂಸಿಎಸ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಬಾಲಕೃಷ್ಣ ಕಿಣಿ ನಿಧನ

ಜಾಹೀರಾತು/Advertisment
ಜಾಹೀರಾತು/Advertisment
ಎಂಸಿಎಸ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಬಾಲಕೃಷ್ಣ ಕಿಣಿ ನಿಧನ
ಮೂಡುಬಿದಿರೆ: ಎಂಸಿಎಸ್ ಬ್ಯಾಂಕಿನ ನಿವೃತ್ತ ಉದ್ಯೋಗಿ, ಶ್ರೀ ವೆಂಕಟರಮಣ ದೇವಸ್ಥಾನ ಸಮೀಪದ ನಿವಾಸಿ, ಬಾಲಕೃಷ್ಣ ಕಿಣಿ (64) ಅನಾರೋಗ್ಯದಿಂದ ಸೋಮವಾರ ನಿಧನರಾದರು.  

ಬ್ಯಾಂಕಿನಲ್ಲಿ ಬಹು ವರ್ಷಗಳ ಕಾಲ ಕ್ಯಾಶಿಯರ್ ಆಗಿದ್ದ ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. 
ಯಕ್ಷಗಾನದ ಅಭಿಮಾನಿಯಾಗಿದ್ದ ಅವರು ಅದರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಯಕ್ಷ ಸಂಗಮದ ಸಕ್ರಿಯ ಸದಸ್ಯರಾಗಿದ್ದವರು ಸಂಸ್ಥೆ ಪೋಷಕರಾಗಿಯೂ ಗುರುತಿಸಿಕೊಂಡಿದ್ದರು. ವೆಂಕರಮಣ ಭಜನಾ ಮಂಡಳಿಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದಾರೆ

Post a Comment

0 Comments