ಬನ್ನಡ್ಕದಲ್ಲಿ ಸರಣಿ ಅಪಘಾತ : ಸವೀ೯ಸ್ ರಸ್ತೆಗೆ ಸ್ಥಳೀಯರ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment
ಬನ್ನಡ್ಕದಲ್ಲಿ ಸರಣಿ ಅಪಘಾತ : ಸವೀ೯ಸ್ ರಸ್ತೆಗೆ ಸ್ಥಳೀಯರ ಆಗ್ರಹ 
ಮೂಡುಬಿದಿರೆ : ತಾಲೂಕಿನ ಅಪಘಾತ ವಲಯವೆಂದು ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಂಡಿರುವ ಬನ್ನಡ್ಕ ರಸ್ತೆಯ ಕುರಿತಂತೆ ಚರ್ಚೆ ನಡೆಸಲು ಪಡುಮಾರ್ನಾಡು ಗ್ರಾಮಸ್ಥರು ಸೋಮವಾರ ಸಂಜೆ ಸಭೆ ನಡೆಸಿದರು. 

ಪ್ರಮುಖರಾದ ಸೂರಜ್ ಮಾರ್ನಾಡ್ ಅವರು ಮಾತನಾಡಿ ಬನ್ನಡ್ಕದಲ್ಲಿ ಸವೀ೯ಸ್ ರಸ್ತೆ ಇಲ್ಲದಿರುವುದರಿಂದ ಜನರಿಗೆ ಆಕಡೆಯಿಂದ ಈ ಕಡೆಗೆ ಹೋಗಲು ಸಮಸ್ಯೆಯಾಗುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸುವಂತೆ ಇಲಾಖೆಯ ಅಧಿಕಾರಗಳ ಜತೆ ಮಾತುಕತೆ ನಡೆಸಬೇಕಾಗಿದೆ ಎಂದರು. 
 ಸಂತೋಷ್, ಅಕ್ಷಯ್, ಸುಧಾಕರ್ ಆಚಾರ್ಯ, ಸಂತೋಷ್ ಜೈನ್ ಮತ್ತಿತರರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. 

ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸಂಪರ್ಕಿಸಿ ಸಮಸ್ಯೆಯ ಗಂಭೀರತೆ ತಿಳಿಸಿದಾಗ ಸ್ಥಳ ಪರಿಶೀಲನೆ ಮಾಡುವ ಬಗ್ಗೆ ಅವರು ಮಾಹಿತಿ ನೀಡಿದರು.

Post a Comment

0 Comments