"ಬೆಂಗಳೂರು ವಿಭಾಗ ಮಟ್ಟದ ಜಿನ ಭಜನ ಸ್ಪರ್ಧೆ ಉದ್ಘಾಟನೆ"

ಜಾಹೀರಾತು/Advertisment
ಜಾಹೀರಾತು/Advertisment

 "ಬೆಂಗಳೂರು ವಿಭಾಗ ಮಟ್ಟದ   ಜಿನ ಭಜನ ಸ್ಪರ್ಧೆ ಉದ್ಘಾಟನೆ"

 ಭಾರತೀಯ ಜೈನ್ ಮಿಲನ್  ವಲಯ -8 ರ   ಜಿನ ಭಜನಾ ಸ್ಪರ್ಧೆ ಇಂದು ಕರ್ನಾಟಕ ಜೈನ್ ಅಸೋಸಿಯೇಷನ್ ಶ್ರೀ ಧರ್ಮಸ್ಥಳ ವೀರೇಂದ್ರ ಹೆಗಡೆ ಸಭಾ ಭವನದಲ್ಲಿ ನಡೆಯಿತು.

ಭಾರತೀಯ  ಜೈನ್ ಮಿಲನ್ ವಲಯ -8 ರ ಬೆಂಗಳೂರು ವಿಭಾಗ ಮಟ್ಟದ ಜಿನ ಭಜನ ಸೀಸನ್-8 ಭಾರತೀಯ  ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ   ಶ್ರೀಮತಿ ಅನಿತಾ ಸುರೇಂದ್ರ ಕುಮಾರ್  ಉದ್ಘಾಟಿಸಿದರು.

 ಇದೇ ಸಂದರ್ಭದಲ್ಲಿ  ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಹಿರಿಯ ಸಾಹಿತಿ  ಧಾರಿಣಿ ಅವರನ್ನು  ಸನ್ಮಾನಿಸಿದರು.

 ಕಾರ್ಯಕ್ರಮದಲ್ಲಿ ಭಾರತೀಯ ಜೈನ್  ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್,   ಜಿನ ಭಜನಾ ಕೇಂದ್ರ ಸಮಿತಿಯ ಮಾರ್ಗದರ್ಶಕ ರಾದ ಶ್ರೀಮತಿ ಶ್ರದ್ಧಾ ಅಮಿತ್, ಭಾರತೀಯ ಜೈನ್ ಮಿಲನ್ ವಲಯ ಎಂಟ ರ ಬೆಂಗಳೂರು ವಿಭಾಗೀಯ ಕಾರ್ಯದರ್ಶಿ   ವಿಲಾಸ್ ಪಾಸಣ್ಣನವರ್, ಉಪಾಧ್ಯಕ್ಷರಾದ  ಡಾ. ಭರತೇಶ ಜಗ ಶೆಟ್ಟಿ,ಜಂಟಿ ಕಾರ್ಯದರ್ಶಿ ಸುಖಾನಂದ, ನಿರ್ದೇಶಕ. ಪಿ ಅಜಿತ್ ಕುಮಾರ್, ಅನಿತಾ ವಾಸುದೇವ್ ಸೇರಿದಂತೆ ಜೈನ ವಿವಿಧ ಸಂಘಟನೆಗಳ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು.

ವರದಿ

ಜೆ. ರಂಗನಾಥ- ತುಮಕೂರು. 

Post a Comment

0 Comments