ಶ್ರವಣಬೆಳಗೊಳ ಶ್ರೀಗಳ "ಮಂಡ್ಯ" ಪುರ ಪ್ರವೇಶ ಭವ್ಯ ಸ್ವಾಗತ"

 "ಶ್ರವಣಬೆಳಗೊಳ ಶ್ರೀಗಳ "ಮಂಡ್ಯ" ಪುರ ಪ್ರವೇಶ ಭವ್ಯ ಸ್ವಾಗತ"

 ಮಂಡ್ಯ : ಶ್ರೀ ಕ್ಷೇತ್ರ ಶ್ರವಣಬೆಳಗೊಳದ  ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಅಭಿನ ಅಭಿನವ ಚಾರು ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾ ಸ್ವಾಮಿ ಗಳು ಮಂಡ್ಯ ನಗರಕ್ಕೆ ಪುರ ಪ್ರವೇಶದ ಹಿನ್ನೆಲೆಯಲ್ಲಿ ಪೂಜ್ಯ ಭಟ್ಟರಕ ಶ್ರೀ ಗಳಿಗೆ ಪೂರ್ಣ  ಕುoಭ ಗಳೊಂದಿಗೆ ಭವ್ಯ ಸ್ವಾಗತ ನೀಡಲಾಯಿತು.ಹಾಗೂ ಹೊಸ 24 ತೀರ್ಥಂಕರುಗಳಿಗೆ ಪೂಜೆ ಅಭಿಷೇಕ ಆರಾಧನೆಗಳನ್ನು ನೆರವೇರಿಸಲಾಯಿತು.


 ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನಮಠದ ಸ್ವಸ್ತಿ ಶ್ರೀ  ಭಾನು ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಪಾವನ ಸನ್ನಿಧಿಯ  ವಹಿಸಿದ್ದರು.ಮಂಗಲ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರವಣಬೆಳಗೊಳ ಜೈನಮಠದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟರಕ ಶ್ರೀಗಳು ಮಂಡ್ಯ ಜೈನ ಸಮಾಜ ಹಾಗೂ ಶ್ರವಣ ಬೆಳಗೊಳ ಗಳ ನಡುವೆ ಸಂಬಂಧದ ಬಗ್ಗೆ ತಿಳಿಸಿ ,ಮಂಡ್ಯದ ಸಮಾಜದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


 ಸಭೆಯಲ್ಲಿ ಮಂಡ್ಯ ಜೈನ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು ,ಕಾರ್ಯದರ್ಶಿಗಳು, ಖಜಾಂಚಿಗಳು ,ಟ್ರಷ್ಟಿಗಳು ,ಜೈನ ಮಹಿಳಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಶ್ರಾವಕ- ಶ್ರಾವಕಿಯರು ಉಪಸ್ಥಿತರಿದ್ರು

 ವರದಿ : ಜೆ ರಂಗನಾಥ ತುಮಕೂರು

Post a Comment

0 Comments

Advertisement