ಮೂಡಾ ಹಗರಣ ಪ್ರಾಶ್ಯೂಕೇಷನ್ : ಮಾಜಿ ಸಚಿವ ಅಭಯಚಂದ್ರ ಖಂಡನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡಾ ಹಗರಣ ಪ್ರಾಶ್ಯೂಕೇಷನ್ : ಮಾಜಿ ಸಚಿವ ಅಭಯಚಂದ್ರ ಖಂಡನೆ

ಮೂಡುಬಿದಿರೆ: ರಾಜ್ಯಪಾಲರು ಮೂಡಾ ಹಗರಣವನ್ನು ಪ್ರಾಶ್ಯೂಕೇಶನ್ ಗೆ ಅನುಮೋದನೆ ನೀಡಿರುವುದನ್ನು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಖಂಡಿಸಿದ್ದಾರೆ.

 ಸಿದ್ಧರಾಮಯ್ಯ ಸರಕಾರದ ಪಂಚ ಗ್ಯಾರಂಟಿಗಳು ದೇಶಕ್ಕೆ ಮಾದರಿಯಾಗಿದ್ದು ಎಂದು ಹೊಗಳಿದ್ದ ರಾಜ್ಯಪಾಲರು ಈಗ ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿರುವುದು ವಿಷಾಧನೀಯ. ರಾಜ್ಯಪಾಲರು ಹಲವು ಬಾರಿ ಸಂಸದರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದು ತನ್ನತನವನ್ನು ಉಳಿಸಿಕೊಳ್ಳಬೇಕು. ರಾಜ್ಯಪಾಲರ ಈ ನಡೆಯನ್ನು ಕಾಂಗ್ರೆಸ್ ಪಕ್ಷವು ಹಿಂಸಾಚಾರವಿಲ್ಲದೆ ಕಾನೂನಾತ್ಮಕವಾಗಿ ಹೋರಾಟ ನಡೆಸಿ ಯಶಸ್ಸು ಕಾಣಲಿದೆ. 

 

ಸಿದ್ಧರಾಮಯ್ಯ ಅವರ ಪತ್ನಿಗೆ ಬಸವರಾಜ್ ಬೊಮ್ಮಾಯಿ ಅವರ ಕಾಲದಲ್ಲಿ ನಿವೇಶನ ಹಂಚಿಕೆಯಾಗಿದ್ದು ಸಿದ್ಧರಾಮಯ್ಯ ಅವರು ಶಿಫಾರಸು ಮಾಡಿಲ್ಲ. ಅವರು ಪ್ರಾಮಾಣಿಕ ಮತ್ತು ದಕ್ಷ ರಾಜಕರಣಿಯಾಗಿದ್ದು ಧ್ವೇಷದಿಂದ ಮಾಡಿದ ಯಾವುದೇ ಕ್ರಮವನ್ನು ಜನ ಕ್ಷಮಿಸುವುದಿಲ್ಲ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Post a Comment

0 Comments