*ರಾಣಿ ಅಬ್ಬಕ್ಕ ಕಿರು ಉದ್ಯಾವನದಲ್ಲಿ ಸ್ವಾತಂತ್ರ್ಯ ಆಚರಣೆ
ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ಅರಮನೆ ಬಾಗಿಲಿನ ಜವನೆರ್ ಬೆದ್ರ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಸ್ವಾತಂತ್ರ್ಯೋತ್ಸವ ಅಚರಿಸಲಾಯಿತು.
ಚೌಟ ಮನೆತನದ ಕುಲದೀಪ್ ಎಂ , ಮಾಜಿ ಯೋಧ ಸುಬೇದಾರ್ ಮೇಜರ್ ರಾಜೇಂದ್ರ ಜಿ ,ರಾಣಿ ಅಬ್ಬಕ್ಕನ ಪುತ್ತಲಿಗೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು.
ಸಂಘಟನೆಯ ಅಧ್ಯಕ್ಷ ಅಮರಕೋಟೆ , ಕಾರ್ಯದರ್ಶಿ ದಿನೇಶ್ ನಾಯಕ್, ಸಂಚಾಲಕ ನಾರಾಯಣ ಪಡುಮಲೆ , ಪ್ರಮುಖರಾದ ರಂಜಿತ್ ಶೆಟ್ಟಿ ,ಮನು ಒಂಟಿ ಕಟ್ಟೆ, ಸಂದೀಪ್ ದರೆಗುಡ್ಡೆ, ಸಂಪತ್ ಪೂಜಾರಿ, ಗಣೇಶ್ ಪೈ, ಸುರೇಶ್ ಕಾಯರಗುಂಡಿ , ಗೀತಾ ಆಚಾರ್ಯ, ಚಂದ್ರಶೇಖರ್ ಕೋಟ್ಯಾನ್, ಪ್ರತಿಶ್ ಸಮಗಾರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ನಡೆಯುವ ಕೃಷ್ಣೋತ್ಸವ 2024 ರ ಆಮಂತ್ರಣವನ್ನು ಚೌಟ ಮನೆತನದ ಕುಲದೀಪ್ ಎಂ ಅವರಿಗೆ ನೀಡಲಾಯಿತು.
0 Comments