ಸಾರ್ವಜನಿಕ ಶಾಂತಿ ಭಂಗ : ಮೂವರ ವಿರುದ್ಧ ಪ್ರಕರಣ ದಾಖಲು
ಮೂಡುಬಿದಿರೆ: ಸಾರ್ವಜನಿಕ ಶಾಂತಿ ಭಂಗ ಮಾಡಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಒಂಟಿ ಕಟ್ಟೆಯ ಮೂರು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆ ಮೂಡುಬಿದಿರೆ ಪೊಲೀಸರು ಬೀಟ್ ನಲ್ಲಿರುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಹೆಲ್ಮಟ್ ಹಾಕದೆ ಹೋಗುತ್ತಿದ್ದ ಒಂಟಿಕಟ್ಟೆಯ ಪ್ರಕಾಶ್ ಕೋಟ್ಯಾನ್ ಮತ್ತು ಸತ್ತಾರ್ ನನ್ನು ಪೊಲೀಸ್ ಉಪನಿರೀಕ್ಷಕ ಕೃಷ್ಣಪ್ಪ ಅವರು ನಿಲ್ಲಿಸಿ ದ್ವಿಚಕ್ರ ವಾಹನದ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ಆಗ ದಾಖಲೆ ಇಲ್ಲ ನಾಳೆ ತಂದು ಕೊಡುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭ ಏಕಮುಖ ರಸ್ತೆಯಲ್ಲಿ ಇನ್ನೊಂದು ವಾಹನ ಬಂದಿದ್ದು ಅವರಿಗೂ ಗಾಡಿಯನ್ನು ಸೈಡಿನಲ್ಲಿ ನಿಲ್ಲಿಸುವಂತೆ ಸೂಚಿಸಿದಾಗ ಅವರೂ ನಮ್ಮ ಸಂಬಂಧಿಕರೆಂದು ಪ್ರಕಾಶ್ ದರ್ಪದಿಂದ ಹೇಳಿದ್ದಲ್ಲದೆ ಬೈಕ್ ನಲ್ಲಿ ತ್ರಿಬಲ್ ರೈಡ್ ಹೊರಟಿದ್ದರು ಆಗ ಮತ್ತೆ ಪೊಲೀಸರು ಮತ್ತು ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಪ್ರಕಾಶ್, ವಿಜೇತ್ ಮತ್ತು ಸತ್ತಾರ್ ಮೂವರು ಸೇರಿ ಪೊಲೀಸರಿಗೆ ಏರು ಧ್ವನಿಯಲ್ಲಿ ಮಾತನಾಡಿ ಸಾರ್ವಜನಿಕ ಶಾಂತಿ ಭಂಗ ಮಾಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಮೂವರು ಠಾಣೆಗೆ ಕರೆದುಕೊಂಡು ಹೋಗಿದ್ದು ನಂತರ ಪ್ರಕಾಶ್ ಮತ್ತು ವಿಜೇತ್ ನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು ಆಗ ಅವರು ಅಮಲು ಪದಾರ್ಥ ಸೇವಿಸಿರುವುದು ಸಾಬೀತಾಗಿದ್ದು ಡ್ರಿಂಕ್ & ಡ್ರೈವ್ ಕೇಸು ದಾಖಲಾಗಿದೆ.
ಸಾರ್ವಜನಿಕವಾಗಿ ಶಾಂತಿ ಭಂಗ ಮಾಡಿರುವ ಹಿನ್ನೆಲೆಯಲ್ಲಿ ಮೂವರು ಕೂಡಾ ಕೋಟ್ ೯ಗೆ ತಲಾ 1 ಲಕ್ಷದ ಬಾಂಡ್ ನೀಡಬೇಕಾಗಿದೆ.
ಪ್ರಕಾಶ್ ಕೋಟ್ಯಾನ್ ಮೂಡಾ ಸದಸ್ಯನಾಗಿದ್ದರೆ, ಸತ್ತಾರ್,ವಿಜೇತ್ ಕಾಂಗ್ರೆಸ್ ಕಾರ್ಯಕರ್ತ
0 Comments