ಮಳೆ ಹಾನಿ: ಮಾಂಟ್ರಾಡಿಯಲ್ಲಿ ಭಾಗಶ: ಕುಸಿದ ಮನೆ

ಜಾಹೀರಾತು/Advertisment
ಜಾಹೀರಾತು/Advertisment

 ಮಳೆ ಹಾನಿ: ಮಾಂಟ್ರಾಡಿಯಲ್ಲಿ ಭಾಗಶ: ಕುಸಿದ ಮನೆ

ಮೂಡುಬಿದಿರೆ: ತಾಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಮಾಂಟ್ರಾಡಿ ಗ್ರಾಮದ ವಸಂತಿ ಕೋಂ ಮಹಾಬಲ ಪೂಜಾರಿ ಇವರ ವಾಸದ ಮನೆಯು ಭಾಗಶ: ಕುಸಿದು ಹಾನಿಯಾಗಿದೆ.

ಈ ಬಗ್ಗೆ ಪಂಚಾಯತ್  ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಅವರು  ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿ  ಮಳೆಯು ಮತ್ತಷ್ಟು ತೀವ್ರಗೊಂಡಿದ್ದರಿಂದ  ಅಪಾಯದಿಂದ ಮನೆಯ ಗೋಡೆ ಬೀಳುವ ಸಂಭವ ಇರುವುದರಿಂದ ಈ ಬಗ್ಗೆ ಅಪಾಯ ಅರಿತು ವಸಂತಿ ಹಾಗೂ ಸದಸ್ಯರನ್ನು  ಪಂಚಾಯತ್ ನ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರ ವಾಗಲು ಲಿಖಿತ ವಾಗಿ ನೋಟೀಸ್ ನೀಡಿದರು.


  ಮನೆಯ ಯಜಮಾನಿ ವಸಂತಿ ಅವರು ತನ್ನ  ಮಗ ಗಣೇಶ ಪೂಜಾರಿ  ಮನೆಯಲ್ಲಿ ವಾಸವಾಗುತ್ತೇನೆ ಎಂದು ತಿಳಿಸಿದ್ದರಿಂದ ಸದ್ಯ ವಸಂತಿ  ಮತ್ತಿತರರು ಸ್ಥಳಾಂತರ ಆಗಿರುತ್ತಾರೆ.

Post a Comment

0 Comments