ಮೂಡುಬಿದಿರೆಯಲ್ಲಿ ಐವನ್ ಡಿಸೋಜಾರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಐವನ್ ಡಿಸೋಜಾರಿಗೆ ಸನ್ಮಾನ 


ಮೂಡುಬಿದಿರೆ: ವಿಧಾನಪರಿಷತ್ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾದ  ಐವನ್ ಡಿಸೋಜ ಅವರಿಗೆ

ಕೆಥೋಲಿಕ್ ಸಭಾ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚಚ್೯   ಸಭಾಂಗಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. 

ಸನ್ಮಾನ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ ನಾನು ಕಾಂಗ್ರೆಸ್ ಪಕ್ಷನಿಷ್ಠೆ ಯ ಬದ್ಧತೆಯಿಂದ  ಕೆಲಸ ಮಾಡಿದ್ದು ತನ್ನ ಸೇವೆಯನ್ನು ಪರಿಗಣಿಸಿ ಎರಡನೇ ಅವಧಿಗೆ ಈ ಸನ್ಮಾನ ಲಭಿಸಿದೆ.  ಸಿಕ್ಕಿದ ಅವಕಾಶವನ್ನು ಬಳಸಿ ನೋಂದವರ ಸಹಾಯ ಹಸ್ತ ಒದಗಿಸುವ ಆದ್ಯತೆ ನೀಡುತ್ತೇವೆ. ಸಿದ್ದರಾಮಯ್ಯ ಸರಕಾರವು ಅಲ್ಪಸಂಬ್ಯಾತರ  ಅಭಿವೃದ್ದಿಗಾಗಿ ಒತ್ತು ನೀಡಿತ್ತಿದ್ದು ಈ ಬಾರಿ ಬಜೆಟ್ ನಲ್ಲಿ 200 ಕೋಟಿ ರೂ ಮೀಸಲಿಸಿದೆ.  ಇದನ್ನು ಸಮಾಜ ಬಾಂಧವರ ಸದುಪಯೋಗಪಡಿಸಿಕೊಳ್ಳಬೇಕು.  


ಮೂಡುಬಿದರೆ ವಲಯ ಚಚ್೯ಗಳ ಮುಖ್ಯ ಧರ್ಮಗುರು, ಓನಿಲ್ ಡಿಸೋಜ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಐವನ್ ಡಿಸೋಜ ಅವರ ವ್ಯಕ್ತಿತ್ವದಲ್ಲಿಯೇ ನಾಯಕತ್ವ  ಗುಣವಿದೆ.  ಹಾಗಾಗಿ ಅವರು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಮತ್ತು ತ್ಯಾಗ ಮತ್ತು ಸೇವೆಯ ಗುಣವಿರುವವರು ಮಾತ್ರ  ನಾಯಕರಾಗಲು ಸಾಧ್ಯ ಎಂದರು.

 ವಕೀಲ ಪ್ರವೀಣ್ ಲೋಬೊ ಅಭಿನಂದನಾ ಭಾಷಣಗೈದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕಥೋಲಿಕ ಸಭಾ ಮೂಡುಬಿದಿರೆ ವಲಯ ಸಮಿತಿಯ ಆದ್ಯಾತ್ಮಿಕ ನಿರ್ದೇಶಕರು ವಂ.ಫಾ.ದೀಪಕ್ ನೋರೋನ್ಹ , 

ಅಭಿನಂದನ ಸಮಿತಿಯ ಸಂಚಾಲಕ ರೋನಾಲ್ಡ್ ಸೇರಾವೊ , ಕಾರ್ಯದರ್ಶಿಗಳಾದ  ರೋಷನ್ ಮಿರಂದ, ಅವಿಲ್ ಡಿ"ಸೋಜ, ಉಪಸ್ಥಿತರಿದ್ದರು.


ಕಥೋಲಿಕ್ ಸಭಾ ಮೂಡುಬಿದಿರೆ ವಲಯದ ಅಧ್ಯಕ್ಷ ಅಲ್ವಿನ್ ರೋಡ್ರಿಗಸ್ ಸ್ವಾಗತಿಸಿದರು. ರಾಜಕೀಯ ಸಂಚಾಲಕಿ  ಅಗ್ನೇಸ್ ಡಿಸೋಜಾ ವಂದಿಸಿದರು.ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments