*ದೇವಸ್ಥಾನ ಸ್ವಚ್ಚತಾ ಅಭಿಯಾನ*
ಉಡುಪಿಯ ಧರ್ಮ ಜಾಗೃತಿ ಸಂಸ್ಥೆಯ ವತಿಯಿಂದ ದಿನಾಂಕ 30-6-2024 ನೇ ಆದಿತ್ಯವಾರದಂದು ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಿತಿಯ ಕಾರ್ಯಕರ್ತರು ಹಾಗೂ ಧರ್ಮ ಪ್ರೇಮಿಗಳು ಪಾಲ್ಗೊಂಡಿದ್ದರು.
ದೇವಸ್ಥಾನದ ಆಡಳಿತ ಮಂಡಳಿಯವರು ಸಮಿತಿಯ ಕಾರ್ಯಕರ್ತರ ಈ ಸೇವಾ ಭಾವವನ್ನು ಶ್ಲಾಘಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು ಹಾರೈಸಿದರು.
ಕಾರ್ಯಕರ್ತರಾದ ಸೌ. ಶ್ಯಾಮಲಾ ಸುರೇಶ್, ಕು.ವಿಜಯಾ ಹಾಗೂ ಇತರರು ಭಾಗವಹಿಸಿದ್ದರು.
0 Comments