ಪಕ್ಷಿ ಸಂಕುಲಗಳ ಉಳಿವಿಗೆ ಗುಬ್ಬಚ್ಚಿ ಗೂಡಿನಿಂದ ಮಾಸ್ತಿಕಟ್ಟೆ ಸರಕಾರಿ ಶಾಲೆಯಲ್ಲಿ ಜಾಗೃತಿ ಅಭಿಯಾನ

 ಪಕ್ಷಿ ಸಂಕುಲಗಳ ಉಳಿವಿಗೆ ಗುಬ್ಬಚ್ಚಿ ಗೂಡಿನಿಂದ ಮಾಸ್ತಿಕಟ್ಟೆ ಸರಕಾರಿ ಶಾಲೆಯಲ್ಲಿ ಜಾಗೃತಿ ಅಭಿಯಾನ 


ಮೂಡುಬಿದಿರೆ:  ಸ್ವರ ಸಾಮ್ರಾಜ್ಯ ನಿರ್ಮಾಣ ಮಾಡುವ ಪಕ್ಷಿ ಸಂಕುಲಗಳ ಅಳಿವು ಉಳಿವು ನಮ್ಮ ಕೈ ಯಲ್ಲಿದೆ. ಪ್ರಕೃತಿಯಲ್ಲಿ ವಿಕೃತಿ ಕಂಡರೆ ದುರಂತ. ಪ್ರಕೃ ತಿಯನ್ನು ಆರಾದಿಸಿದರೆ ಪಕ್ಷಿಗಳ ಕಲರವ ಸಾಧ್ಯ ಎಂದು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು.



ಅವರು ಮೂಡುಬಿದಿರೆ  ಮಾಸ್ತಿಕಟ್ಟೆ   ಸರಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ನಡೆದ ಗುಬ್ಬಚ್ಚಿಗೂಡು, ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ರಮ್ಯ ನಿತ್ಯಾನಂದ ಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Post a Comment

0 Comments

Advertisement