ಕಂಬಳ ಸಮಾಲೋಚನಾ ಸಭೆ, ಸಾಧಕರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಕಂಬಳ ಸಮಾಲೋಚನಾ ಸಭೆ, ಸಾಧಕರಿಗೆ ಸನ್ಮಾನ



ಮೂಡುಬಿದಿರೆ : ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಮೂಡುಬಿದಿರೆಯ ಕಡಲಕೆರೆ ಬಳಿ ಇರುವ ಸೃಷ್ಠಿ ಗಾರ್ಡನ್ ನಲ್ಲಿ ಸೋಮವಾರ ಕಂಬಳದ ಈ ಋತುವಿನ ಸಮಾಲೋಚನಾ ಸಭೆ ನಡೆಯಿತು.

 ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೋಣದ ಯಜಮಾನರುಗಳಿಗೆ, ವ್ಯವಸ್ಥಾಪಕರಿಗೆ ಹಾಗೂ ತೀರ್ಪುಗಾರರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

 ನಂತರ ಮಾತನಾಡಿದ ಅವರು ಕಂಬಳ ಸುಸಜ್ಜಿತವಾಗಿ ನಡೆಯಬೇಕಾದರೆ ಕಂಬಳದ ಕೋಣಗಳ ಯಜಮಾನರುಗಳು, ಕೋಣಗಳನ್ನು ಬಿಡುವವರು ಮತ್ತು ಓಡಿಸುವವರ ಸಹಕಾರವೂ ಮುಖ್ಯವಾಗಿ ಬೇಕು. ಯಾವುದೇ ಗೊಂದಲಗಳಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಏಕ ಮನಸಿನಿಂದ ಕಂಬಳವನ್ನು ಮುನ್ನಡೆಸಬೇಕಾಗಿದೆ ಎಂದ ವೈಯಕ್ತಿಕವಾಗಿ ಕಂಬಳದ ಬಗ್ಗೆ  ಯಾರೂ ಕೂಡಾ ಮಾಧ್ಯಮದ ಮುಂದೆ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಠಿಸಬಾರದು ಎಂದು ಮನವಿ ಮಾಡಿದರು.

 ಈ ವರ್ಷ ನಡೆಯುವ  ಕಂಬಳದ ದಿನಾಂಕದಲ್ಲಿ ಕೆಲವು ಕಂಬಳಗಳ ದ ಬದಲಾವಣೆ ಇರುವುದರಿಂದ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು ಹಿರಿಯರ ಜತೆ  ಚರ್ಚಿಸಿ ದಿನಾಂಕದ ಮಾಹಿತಿ ನೀಡುವುದೆಂದು ತೀರ್ಮಾನಿಸಲಾಯಿತು.

  ಸಮಿತಿಯ ಗೌರವಾಧ್ಯಕ್ಷ ಗುಣಪಾಲ ಕಡಂಬ, ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಚಂದ್ರ ಆಳ್ವ,    ಸಾಂಪ್ರಾದಾಯಿಕ ಕಂಬಳಗಳ  ಬೈಂದೂರು ವಲಯದ ಅಧ್ಯಕ್ಷ ವೆಂಕಟ ಪೂಜಾರಿ, ಮಾಜಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಕೋಣಗಳ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಅಡ್ವೆ ಕಂಬಳದ ವ್ಯವಸ್ಥಾಪಕರಾದ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ಜಪ್ಪು ಕಂಬಳದ ವ್ಯವಸ್ಥಾಪಕರಾದ ಅನಿಲ್ ಶೆಟ್ಟಿ, ತೀರ್ಪುಗಾರ ವಿಜಯಕುಮಾರ್ ಕಂಗಿನ ಮನೆ  ಉಪಸ್ಥಿತರಿದ್ದರು.

ತೀರ್ಪುಗಾರರಾದ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments