ಮೂಡುಬಿದಿರೆ: ಧರ್ಮ ಬಂಧು ದಶ ಲಕ್ಷಣ ಪರ್ವ ನಿಮಿತ್ತ ಕೆನಡಾ ದೇಶದ ವಾಣಿಜ್ಯ ನಗರ ವ್ಯಾ oಕೋವರ್ ಜೈನ್ ಸೆಂಟರ್ ಅಹ್ವಾನ ಮೇರೆಗೆ ಮೂಡುಬಿದಿರೆ ಜೈನ ಮಠದ ಜಗದ್ಗುರು ಡಾ.ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನಾಳೆಯಿಂದ 10 ದಿನಗಳ ವಿದೇಶ ಧಾರ್ಮಿಕ ಪ್ರವಾಸ ಕೈಗೊಳ್ಳ ಲಿದ್ದಾರೆ
ಎಂದು ಮಠದ ಪ್ರಕಟನೆ ತಿಳಿಸಿದೆ.
ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ
ವರ್ಷoಪ್ರತಿ ಜರುಗುವ ದಶ ಲಕ್ಷಣ ಮಹಾ ಪರ್ವವು ಬಾದ್ರಪದ ಚತುರ್ಥಿ 19-29 ಹುಣ್ಣಿಮೆವರೆಗೆ ಹಾಗೂ ಸಾಮೂಹಿಕ ಕ್ಷಮಾವಳಿ
ಕಾರ್ಯಕ್ರಮವು ಅ.2 ಸಂಜೆ ಶ್ರೀ ಜೈನ ಮಠದಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಸ್ವಾಮೀಜಿಯವರ ಮಾರ್ಗದರ್ಶನ ಆಶೀರ್ವಾದ ಗಳೊಂದಿಗೆ ಹತ್ತು ದಿನ ಪರ್ಯಂತ ಜರುಗಲಿದೆ.
ದಶ ಲಕ್ಷಣ ಪರ್ವ ಪ್ರತಿ ವರ್ಷ ದಂತೆ ಈ ವರ್ಷ ಶ್ರೀ ಮಠ ಮೂಡುಬಿದಿರೆಯಲ್ಲಿ ಬೆಳಿಗ್ಗೆ ಗಂಟೆ 7.35ರಿಂದ8.15ರ ವರೆಗೆ ಜರುಗಲಿದೆ.
ಗುರು ಬಸದಿಯಲ್ಲಿ
ಮಧ್ಯಾಹ್ನ 2.00ರಿಂದ 5.00 ರ ವರೆಗೆ ಜರುಗಲಿದೆ.
ದಶ ಧರ್ಮಗಳ ಹೆಸರು ಮತ್ತು ದಿನಾಂಕ ಈ ರೀತಿಯಲ್ಲಿ ದೆ
* ನಾಳೆ ಉತ್ತಮ ಕ್ಷಮಾ ಧರ್
* 20.09.23
ಬುಧವಾರದಂದು
ಉತ್ತಮ ಮಾಧ೯ವ ಧರ್ಮ.
* 21 ಗುರುವಾರದಂದು
ಉತ್ತಮ ಅರ್ಜವ ಧರ್ಮ
* 22 ಶುಕ್ರವಾರ
ಉತ್ತಮ ಶೌಚ ಧರ್ಮ
* 23 ಶನಿವಾರ
ಉತ್ತಮ ಸತ್ಯ ಧರ್ಮ
*24 ರವಿವಾರ
ಉತ್ತಮ
ಸಂಯಮ ಧರ್ಮ.
* 25 ಸೋಮವಾರ
ಉತ್ತಮ ತಪ ಧರ್ಮ .
* 26 ಮಂಗಳವಾರ
ಉತ್ತಮ ತ್ಯಾಗ ಧರ್ಮ.
27 ಬುಧವಾರದಂದು
ಉತ್ತಮ ಅಕಿಂಚನ್ಯ ಧರ್ಮ.
* 28 ಗುರುವಾರದಂದು
ಉತ್ತಮ
ಬ್ರಹ್ಮ ಚರ್ಯ.
ಈ ಬಾರಿ ಸಾಮೂಹಿಕ ಕ್ಷಮಾವಳಿ ಭಟ್ಟಾರಕ ಭವನ ಶ್ರೀ ಜೈನ ಮಠ ದಲ್ಲಿ 02.10.23 ರಂದು
ಶನಿವಾರ ಸಂಜೆ 5.35ರಿಂದ
ಜರುಗಲಿದೆ ಎಂದು ಮಠದ ವ್ಯವಸ್ಥಾಪಕರಾದ
ಸಂಜಯಂತ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
0 Comments