ನಿವೃತ್ತ ಬ್ಯಾಂಕ್ ಮೆನೇಜರ್, ಪವರ್ ಲಿಫ್ಟರ್ ಯಶವಂತ ದೇವಾಡಿಗ
ಮೂಡುಬಿದಿರೆ: ಮಂಗಳೂರು ಸಿಂಡಿಕೇಟ್ ಬ್ಯಾಂಕ್(ಈಗಿನ ಕೆನರಾ ಬ್ಯಾಂಕ್)ನ ನಿವೃತ್ತ ಹಿರಿಯ ಮೆನೇಜರ್, ರಾಷ್ಟ್ರೀಯ ಪವರ್ ಲಿಫ್ಟರ್ ಆಗಿದ್ದ ಮಂಗಳೂರು ಅಶೋಕ ನಗರ ನಿವಾಸಿ ಯಶವಂತ ದೇವಾಡಿಗ(64)ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.
ಮೂಲತ: ಮೂಡುಬಿದಿರೆ ಕಲ್ಲಬೆಟ್ಟು ಕೊಂಕಣಬೆಟ್ಟು ನಿವಾಸಿಯಾಗಿದ್ದ ಅವರು ಸಿಂಡಿಕೇಟ್ ಬ್ಯಾಂಕ್ನ ಮೂಡುಬಿದಿರೆ, ಕೈಕಂಬ, ಅಹಮ್ಮಾದಬಾದ್ ಹಾಗೂ ಮಂಗಳೂರಿನ ಶಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ರಾಷ್ಟ್ರೀಯ ಪವರ್ ಲಿಫ್ಟರ್ ಆಗಿದ್ದ ಅವರು 1984-90ರ ಅವಧಿಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
0 Comments