ಮೂಡುಬಿದಿರೆ: ಅಷ್ಟೋತ್ತರ ನಾಳಿಕೇರ ಅಷ್ಟದ್ರವ್ಯ ಗಣಯಾಗ ಸಮಾಪನ
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡುಬಿದಿರೆ ಇದರ ವಜ್ರಮಹೋತ್ಸವದ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಗುರುವಾರ ಬೆಳಿಗ್ಗೆ ಆರಂಭಗೊಂಡ ಅಷ್ಟೋತ್ತರ ನಾಳಿಕೇರ ಅಷ್ಟದ್ರವ್ಯ ಗಣಯಾಗವು ಭಕ್ತಾಧಿಗಳ ಸಮ್ಮುಖದಲ್ಲಿ ಮಧ್ಯಾಹ್ನದ ವೇಳೆಗೆ ಸಮಾಪನಗೊಂಡಿತು.
ಮೂಡುಬಿದಿರೆ ಸಮಾಜ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ಜರಗಿದ ಯಾಗದಲ್ಲಿ ಜಿಲ್ಲೆಯ ಪ್ರತಿಷ್ಠಿತ ಋತಿವರ್ಯರು ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ಮಾಡುವ ಮೂಲಕ ಯಾಗವನ್ನು ಯಶಸ್ವಿಗೊಳಿಸಿದರು.
ಸಮಿತಿಯ ಕಾರ್ಯದರ್ಶಿ ನಾರಾಯಣ ಪಿ.ಎಂ., ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆ ಕುಲದೀಪ ಎಂ., ಉದ್ಯಮಿ ವಿಶ್ವನಾಥ ಪ್ರಭು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪುರಸಭಾ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಬಿ. ಜಯಶ್ರೀ ಅಮರನಾಥ ಶೆಟ್ಟಿ, ಮತ್ತಿತರ ಗಣ್ಯರು ಯಾಗದಲ್ಲಿ ಭಾಗವಹಿಸಿದ್ದರು.
0 Comments