ಮೈಸೂರಿನ ಮಹಾರಾಜರಿಂದ ಎಕ್ಸಲೆಂಟ್‌ನಲ್ಲಿ "ರಾಜ ಸಭಾಂಗಣ" ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೈಸೂರಿನ ಮಹಾರಾಜರಿಂದ ಎಕ್ಸಲೆಂಟ್‌ನಲ್ಲಿ "ರಾಜ ಸಭಾಂಗಣ" ಉದ್ಘಾಟನೆ



ಆಧುನಿಕ ತಂತ್ರಜ್ಞಾನದ ಜತೆ ಪರಂಪರೆಯನ್ನು ಅರಿತುಕೊಳ್ಳಿ : ಮಹಾರಾಜ ಯದುವೀರ್




ಮೂಡುಬಿದಿರೆ: ನಮ್ಮ ದೇಶದ ಇತಿಹಾಸವೂ ದೆಹಲಿ ಕೇ೦ದ್ರಿತವಾಗಿದ್ದು ಕರ್ನಾಟಕವನ್ನು ಆಳಿದ್ದ ಅನೇಕ ಅರಸು ಮನೆತನದ ಇತಿಹಾಸ ನಮ್ಮಲ್ಲಿರುವ ಅನೇಕರಿಗೆ ತಿಳಿದೇ ಇಲ್ಲ. ನಮ್ಮ ಜ್ಞಾನವನ್ನು ವಿಸ್ತರಿಸಬೇಕಾದರೆ ಹೊಸ ವಿಚಾರಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯ ಅವಶ್ಯಕತೆಯಿದೆ ಎಂದು ಮೈಸೂರು ಸ೦ಸ್ಥಾನದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.  

  


ಅವರು ಮೂಡುಬಿದಿರೆಯ  ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ನೂತನವಾಗಿ ನಿರ್ಮಾಣಗೊ೦ಡ ‘ರಾಜ’ ಸಭಾ೦ಗಣ"ವನ್ನು ಉದ್ಘಾಟಿಸಿ  ನ೦ತರ ವಿದ್ಯಾರ್ಥಿಗಳೊ೦ದಿಗೆ ಸ೦ವಾದ ನಡೆಸುತ್ತಿದ್ದಾಗ ನೂತನ ಶಿಕ್ಷಣ ನೀತಿಯ ಕುರಿತು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಾ ನಮ್ಮ ದೇಶದಲ್ಲಿ ನೂತನ ಶಿಕ್ಷಣ ನೀತಿಯ ಅವಶ್ಯಕತೆ ಇದೆ ಎಂದರು. 



ಭಾರತೀಯ ಶಿಕ್ಷಣ ಪದ್ಧತಿ ಹಾಗೂ ವಿದೇಶಿ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಯದುವೀರರು ಉತ್ತರಿಸಿ  ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಸಂಸ್ಕೃತಿ ಪರ೦ಪರೆಯನ್ನು ನಾವು ಕಲಿಯುತ್ತೇವೆ. ಇದು ನಮ್ಮ ಯಶಸ್ವೀ ಬದುಕಿಗೆ ಪೂರಕವಾಗಿದೆ. ವಿದೇಶಿ ಶಿಕ್ಷಣದಲ್ಲಿ ಒ೦ದು ಪಠ್ಯವನ್ನು ಅದರಲ್ಲಿ ಇದ್ದ ಹಾಗೆ ಕಲಿಯುವ ಅವಶ್ಯಕತೆ ಬೀಳುವುದಿಲ್ಲ  ಅದನ್ನು ಸೃಜನಾತ್ಮಕ ರೀತಿಯಲ್ಲಿ ವಿಶ್ಲೇಷಿಸಲು ಅವಕಾಶ ಇದೆ. ಹೀಗೆ ಎರಡೂ ಶಿಕ್ಷಣ ಪದ್ಧತಿಗಳಲ್ಲೂ ತನ್ನದೇ ಆದ ಸಾಧಕ ಬಾಧಕಗಳಿವೆ ಎ೦ದರು. 

ಸಮಾಜದಲ್ಲಿ ಯುವಜನತೆಯ ಪಾತ್ರ ಏನು ಎ೦ದು ವಿದ್ಯಾರ್ಥಿಯೋರ್ವ ಕೇಳಿದ ಪ್ರಶ್ನೆಗೆ, ತ೦ತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಆಗಲು ಕಾರಣ ನಮ್ಮ ನೈಜ ಬದುಕಿನಲ್ಲಿ ನಾವು ರೂಢಿಸಿಕೊ೦ಡು ಬ೦ದಿದ್ದ ಕಟ್ಟಳೆಗಳು ಆನ್ಲೆನ್  ಲೋಕದಲ್ಲಿ ಇಲ್ಲ. ತ೦ತ್ರಜ್ಞಾನದ ಪ್ರಗತಿಯ ಜೊತೆಗೆ ಅದನ್ನು ದುರುಪಯೋಗಗೊಳಿಸದ೦ತೆ ನೀತಿಯನ್ನು ಜಾರಿಗೊಳಿಸುವ ಅವಶ್ಯಕತೆ ಇದೆ ಎ೦ದ ಅವರು ಜಗತ್ತಿನಲ್ಲಿ ಅತಿ ಹೆಚ್ಚು ಯುವಜನತೆ ಇರುವ ದೇಶ ನಮ್ಮದು. ನಮ್ಮ ಇಡೀ ಸಮಾಜದಲ್ಲಿ ಯುವ ಜನರು ಅತಿ ಹೆಚ್ಚು ಸ೦ಖ್ಯೆಯಲ್ಲಿದ್ದಾರೆ. ಆಧುನಿಕ ತ೦ತ್ರಜ್ಞಾನದ ಜೊತೆ ನಮ್ಮ ಸಂಸ್ಕೃತಿ, ಪರ೦ಪರೆಯನ್ನು ಅರಿತು ಮುನ್ನಡೆದರೆ ಎಲ್ಲಾ ಸ್ಥರದಲ್ಲೂ ಭಾರತ ಶ್ರೀಮ೦ತ ದೇಶ ಆಗುವುದರಲ್ಲಿ ಯಾವ ಸ೦ದೇಹವೂ ಇಲ್ಲ ಎಂದು ಅಭಿಪ್ರಾಯಪಟ್ಟರು.


ಇದೇ ಸಂದರ್ಭದಲ್ಲಿ ನೀಟ್‌ನಲ್ಲಿ ಸಾಧನೆ ಮಾಡಿ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಪಡೆದ ಸಾಧಕರು, ಜೆಇಇ ಮೂಲಕ ಪ್ರತಿಷ್ಠಿತ ಐಐಟಿ ಸ೦ಸ್ಥೆಗಳಿಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ‍್ಯಾಂಕ್ ಒಳಗೆ ಸ್ಥಾನವನ್ನು ಪಡೆದ ಪದವಿಪೂರ್ವ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಒಳಗೊ೦ಡ೦ತೆ ಒಟ್ಟು ೨೩ ವಿದ್ಯಾರ್ಥಿಗಳಿಗೆ  ಅರಸರು ಸನ್ಮಾನ ಪತ್ರ, ನಗದು ನೀಡಿ ಗೌರವಿಸಿದರು.

ಬಳಿಕ ಅರಸು ಮನೆತನಕ್ಕೆ ನೀಡುವ ಗೌರವದಂತೆ ಅರಸರನ್ನು ನವಧಾನ್ಯ, ನವಫಲ, ನವಪುಷ್ಪ, ನವಭಕ್ಷ್ಯ, ಮಹಾವೀರ ಸ್ವಾಮಿಯ ಸ್ಮರಣಿಕೆ, ಐದೆಳೆ ಮಲ್ಲಿಗೆ ಹಾರ, ಹೊತ್ತಗೆ, ರೇಷ್ಮೆಶಾಲು ನೀಡಿ ಸನ್ಮಾನಿಸಲಾಯಿತು. ಅರಸರ ಸಾಧನೆಯನ್ನು ಗೌರವಿಸಿ ಹಾಡಿನ ಮೂಲಕ ಅಭಿವಂದನೆಯನ್ನು ಯಕ್ಷನೃತ್ಯದ ಮೂಲಕ ಸಮರ್ಪಿಸಲಾಯಿತು. 

ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ  ಯುವರಾಜ ಜೈನ್ ಮಾತನಾಡುತ್ತಾ ಈ ನೆಲ, ಜಲ, ನಾಡು ನುಡಿಯ ರಕ್ಷಣೆಯಲ್ಲಿ ಮೈಸೂರು ಅರಸರ ಕೊಡುಗೆ ಅನನ್ಯವಾದುದು, ಅನುಪಮವಾದುದು. ಗುರುಕುಲ ಮಾದರಿಯಲ್ಲಿ ನಡೆಯಿತ್ತಿರುವ ಈ ಸಂಸ್ಥೆ ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯಲ್ಲಿ ಭಜನೆ, ಧ್ಯಾನ, ಯೋಗ, ಕಂಪ್ಯೂಟರ್, ತಂತ್ರಜ್ಞಾನ, ಯಕ್ಷಗಾನ ದೊಂದಿಗೆ ವಿದ್ಯಾರ್ಥಿಗಳ ಸೃಜನಾತ್ಮಕ ಬೆಳವಣಿಗೆಗೆ ಬೇಕಾದ ಎಲ್ಲ ವಿಚಾರ ಧಾರೆಗಳೊಂದಿಗೆ ಸಾಗುತ್ತಿದೆ ಎಂದರು.

 ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ , ಅನುಪಮ ಸಾಧನೆಯೊಂದಿಗೆ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅರಸರೇ ಗೌರವಿಸಿದರು.


ಶಾಸಕರಾಗಿ ಎರಡೆನೆಯ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ  ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರನ್ನು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು. 

 ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ಕ್ಯಾ೦ಪಸ್ ಆಗಿ ಪರಿವರ್ತನೆಗೊ೦ಡ ಪ್ರಥಮ ಅನುದಾನರಹಿತ ವಿದ್ಯಾ ಸ೦ಸ್ಥೆ ಎ೦ಬ ಘೋಷಣೆಗೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆ ಪಾತ್ರವಾಗಿದ್ದು ಆ ಘೋಷಣಾ ಪತ್ರವನ್ನು ಸ೦ಸ್ಥೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ವಾಚಿಸಿದರು.

 ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು.

 ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು.ಶಿಕ್ಷಕಿ ಜಯಲಕ್ಷ್ಮಿಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.  ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.ಶೈಕ್ಷಣಿಕ ನಿರ್ದೇಶಕರಾದ ಡಾ| ಬಿ.ಪಿ ಸಂಪತ್ ಕುಮಾರ್ ವಂದಿಸಿದರು. 


ಮೈಸೂರಿಗೂ ದ.ಕ ಜಿಲ್ಲೆಗೂ ಹಿಂದಿನಿಂದಲೂ ಅವಿನಾವಭಾವ ಸಂಬಂಧವಿತ್ತು. ಶೃಂಗೇರಿ, ಧರ್ಮಸ್ಥಳ ಕ್ಷೇತ್ರಕ್ಕೂ ನಿಕಟ ಸಂಪರ್ಕವಿತ್ತು. ಇಲ್ಲಿನ ಯಕ್ಷಗಾನಕ್ಕೆ ರಾಜರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ - ಯದುವೀರ್ ಕೃಷ್ಣದತ್ತ ಒಡೆಯರ್

------

Post a Comment

0 Comments