ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಡಾ ಚೂಂತಾರು

ಜಾಹೀರಾತು/Advertisment
ಜಾಹೀರಾತು/Advertisment

 ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಡಾ ಚೂಂತಾರು



ವನಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತ ವಾಗಬಾರದು. ಗಿಡ ನೆಟ್ಟು ಪೋಷಿಸಿ ಪರಿಸರ  ಉಳಿಸಲು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಹಸಿರು ಇದ್ದರೆ ಉಸಿರು. ಹಸಿರು ಇಲ್ಲವಾದಲ್ಲಿ ಜೀವನ ದುಸ್ತರ ವಾಗಬಹುದು ಎಂದು ದ ಕ ಜಿಲ್ಲಾ ಗ್ರಹ ರಕ್ಷಕ ದಳದ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.



 ಅವರು ಭಾನುವಾರ ಸರಕಾರಿ ಪ್ರೌಢ ಶಾಲೆ ಪ್ರಾಂತ್ಯ ಮೂಡುಬಿದಿರೆ ಇಲ್ಲಿ ಗೃಹರಕ್ಷಕ ದಳ ಮೂಡಬಿದಿರೆ ಘಟಕದಿಂದ  ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. 

 ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ॥ಮುರಳಿ ಮೋಹನ್ ಚೂಂತಾರ್ ಹಾಗೂ ಮಂಗಳೂರು ಘಟಕದ  ಗೃಹರಕ್ಷಕರಾದ ದಿವಾಕರ, ಸುನೀಲ್ ಹಾಗೂ ಪ್ರಾಂತ್ಯ ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಚಂದ್ರ ನಾಯ್ಕ,,ಶಿಕ್ಷಕಿ ಮಮತ,ಶಾಲಾ ವಿದ್ಯಾರ್ಥಿಗಳು ಹಾಗೂ ಮೂಡುಬಿದಿರೆ ಗೃಹರಕ್ಷಕ ದಳದ  ಘಟಕಾಧಿಕಾರಿ ಪಾಂಡಿರಾಜ್ ಹಾಗೂ  ಗೃಹರಕ್ಷಕ ಗೃಹರಕ್ಷಕಿಯರು ಹಾಜರಿದ್ದರು. ಸುಮಾರು ೨೫ ಹಣ್ಣಿನ ಗಿಡಗಳನ್ನು ನೆಡಲಾಯಿತು.

Post a Comment

0 Comments