ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ* 125ನೇ ವಾರದ ಸ್ವಚ್ಛತಾ ಕಾರ್ಯವು

 *ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ*

125ನೇ ವಾರದ ಸ್ವಚ್ಛತಾ ಕಾರ್ಯವು 



*ಜ್ಯೋತಿನಗರ ಅಯ್ಯಪ್ಪ ಮಂದಿರ ಬಳಿ ಇರುವ "ಮಲ್ಯ ಕಟ್ಟೆಯಲ್ಲಿ"* ಅಶ್ವತ್ಥ ವೃಕ್ಷದ ಕೊಂಬೆಗಳು ಮುರಿದು ಬಿದ್ದಿದ್ದು ಅವುಗಳನ್ನು "ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೆಂಪ್ಲಾಜೆ" ದೇವರ ಕೆಲಸಕ್ಕಾಗಿ ನೀಡಲಾಯಿತು, ಕಟ್ಟೆಯಲಿರುವ ದೇವರ ಫೋಟೋ ಗಳ  ಫ್ರೇಮ್ ಹಾಗೂ ಗಾಜನ್ನು ಬೇರ್ಪಡಿಸಿ ದೇವರ ಭಾವಚಿತ್ರವನ್ನು ನದಿಯಲ್ಲಿ ವಿಸರ್ಜಿಸಿ, ಕಟ್ಟೆಯನ್ನು ಶುಚಿಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕರಾದ ಶ್ರೀ ದಿವಾಕರ್ ರೈ ಹಾಗೂ ಶ್ರೀ ಸಿದಪ್ಪ ನರನೂರು, ಮೂಡುಬಿದಿರೆ ಖ್ಯಾತ ಉದ್ಯಮಿಗಳಾದ ಶ್ರೀ ರಾಜೇಶ್ ಮಲ್ಯ ರವರು ಆಗಮಿಸಿದ್ದು ನಮ್ಮ ಕಾರ್ಯವನ್ನು ಶ್ಲಾಘಿಸಿದರು, ನೇತಾಜಿ ಬ್ರಿಗೇಡ್ ಸಂಚಾಲಕರು , ಪಧಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

Advertisement