ಕೋಟಿ ವೃಕ್ಷ ಅಭಿಯಾನ: ಬೋರುಗುಡ್ಡೆಯಲ್ಲಿ ವನಮಹೋತ್ಸವ

 ಕೋಟಿ ವೃಕ್ಷ ಅಭಿಯಾನ:

ಬೋರುಗುಡ್ಡೆಯಲ್ಲಿ ವನಮಹೋತ್ಸವ



ಮೂಡುಬಿದಿರೆ: ಅರಣ್ಯ ಇಲಾಖೆ ಮೂಡುಬಿದಿರೆ ಮತ್ತು ನೆಲ್ಲಿಕಾರು ಗ್ರಾಮ ಪಂಚಾಯತ್ ಇವುಗಳ ಆಶ್ರಯದಲ್ಲಿ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಎಂಬಲ್ಲಿ ಕೋಟಿ ವೃಕ್ಷ ಅಭಿಯಾನದಡಿ ವನ ಮಹೋತ್ಸವ ಕಾರ್ಯಕ್ರಮ ನಡೆಯಿತು. 

ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಅವರು ಗಿಡ ನೆಡುವುದರ ಮೂಲಕ ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಜಯಂತ ಹೆಗ್ಡೆ , ಉದಯ ಪೂಜಾರಿ ,ಆಶಾಲತಾ ಅಣ್ಣಿ ಪೂಜಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ , ಕಾರ್ಯದರ್ಶಿ ದಾಮೋದರ ಉಪ ವಲಯ ಅರಣ್ಯ ಅಧಿಕಾರಿ ಕಾವ್ಯ ಅರಣ್ಯ ಗಸ್ತು ಪಡೆಯ ರಮೇಶ್ ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು.

Post a Comment

0 Comments

Advertisement