ಮೂಡುಬಿದಿರೆ: ನಾಗರಕಟ್ಟೆ ಅಶ್ವತಕಟ್ಟೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಭಜನಾ ಸಂಕೀರ್ತನೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಾಗರಕಟ್ಟೆ ವತಿಯಿಂದ   52 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಸಂಕೀರ್ತನೆಯು  ದಿನಾಂಕ 10 ,12,2022 ರಂದು ಬೆಳಿಗ್ಗೆ 8 ಗಂಟೆಗೆ ನಾಗರಕಟ್ಟೆ ಬಳಿಯ ಅಶ್ವತಕಟ್ಟೆಯಲ್ಲಿ ನಡೆಯಲಿದೆ.

ಸಂಜೆ ಕಾಳಿಕಾ ಭಜನಾ ಮಂಡಳಿ ಮೂಡುಬಿದಿರೆ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ನಂತರ ಶ್ರೀ ಸತ್ಯನಾರಾಯಣ ದೇವರ ಕಲಶ ಪ್ರತಿಷ್ಠೆ, ಮಹಾಪೂಜೆ ಹಾಗೂ ತುಳುನಾಡ ಗಾನಗಂಧರ್ವ ಬಿರುದಾಂಕಿತ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ, ತದನಂತರ ರಾತ್ರಿ 12 ಗಂಟೆಯಿಂದ ಮಕ್ಕಳಿಂದ ಚಂದ್ರಾವಳಿ ವಿಲಾಸ ಎಂಬ ಹಾಸ್ಯ ಭರಿತ ಯಕ್ಷಗಾನ ಬಯಲಾಟ ಜರುಗಲಿದೆ.

Post a Comment

0 Comments