ಮೂಡುಬಿದಿರೆ: ಪೃಥ್ವಿ ಜ್ಯುವೆಲ್ಸ್ ಮೂಡುಬಿದಿರೆಯಲ್ಲಿ ಎರಡನೇ ಬಾರಿಗೆ ಹಮ್ಮಿಕೊಂಡಿರುವ ಚಿನ್ನ, ಬೆಳ್ಳಿ,ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆ ಶುಕ್ರವಾರ ಬೆಳಿಗ್ಗೆ ಸಮಾಜ ಮಂದಿರದಲ್ಲಿ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉದ್ಯಮಿ ಅಬುಲ್ ಅಲಾ ಪುತ್ತಿಗೆ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಮ್ಯಾ ವಿಕಾಸ್, ಜೇಸಿ ಅಧ್ಯಕ್ಷೆ ಶಾಂತಳಾ ಎಸ್.ಆಚಾರ್ಯ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಜ್ಯುವೆಲ್ಸ್ ನ ಆಡಳಿತ ನಿರ್ದೇಶಕ ಆಶಿಷ್ ಮಾಲ್, ಸಿ.ಇ.ಒ.ಮುರಳಿಕೃಷ್ಣ,ಬ್ರಾಂಚ್ ಮೆನೇಜರ್ ಅನಿಲ್ ಹಾಗೂ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಿ.12 ರ ವರೆಗೆ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ
0 Comments