ಮೊದಲ ಪ್ರದರ್ಶನದಲ್ಲೇ ಸೈ ಎನಿಸಿಕೊಂಡ ಭರಣಿ ಕೃತಿಕೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ರಂಗಭೂಷಣ ಮಣಿ ಕೋಟೆಬಾಗಿಲು ಇವರ ಕಥೆ.. ಸಂಭಾಷಣೆ, ನಿರ್ದೇಶನದ ಸಾರಥ್ಯದಲ್ಲಿ ಮೂಡಿ ಬಂದ ಭರಣಿ ಕ್ರತಿಕೆ,, ನಾಟಕದ ಪ್ರಥಮ ಪ್ರದರ್ಶನವು ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಅದ್ಭುತವಾಗಿ ಮೂಡಿ ಬಂತು ಕಥೆ ಸಂಭಾಷಣೆ ಗೀತಾ ರಚನೆ ನಿರ್ದೇಶನ ಹಾಗೂ ಪ್ರತಿಯೊಬ್ಬ ಕಲಾವಿದರ ಅದ್ಭುತವಾದ ನಟನೆ ಎಲ್ಲ ದೃಶ್ಯದಲ್ಲಿ ಕೂಡ ಪರಿಪೂರ್ಣವಾಗಿ ಎದ್ದು ಕಾಣುತ್ತದೆ ಒಬ್ಬ ಕಲಾವಿದ ಎಲ್ಲ ರೀತಿಯ ನಟನೆಯಲ್ಲು ಕೂಡ ಪ್ರೇಕ್ಷಕರ ಮನಸು ಗೆಲ್ಲ ಬಹುದು ಅನ್ನೋ ವಿಚಾರವನ್ನು ಅಚ್ಚು ಕಟ್ಟಾಗಿ ತೋರಿಸಿದ್ದಾರೆ.

 ಒಬ್ಬ ಖಳನಾಯಕನ ಪಾತ್ರವನ್ನು ಮಾಡುವ ಕಲಾವಿದ ಮನಸ್ಸು ಮಾಡಿದ್ರೆ ಬೇರೆ ಬೇರೆ ವಿಭಿನ್ನ ರೀತಿಯ ಪಾತ್ರಕ್ಕೂ ಸೈ ಅನ್ನೋ ವಿಚಾರವನ್ನು ಕೂಡ ಈ ಒಂದು ಕಥೆಯಲ್ಲಿ ನೋಡಬಹುದು ಸಮಾಜದಲ್ಲಿ ಎಲ್ಲರಿಗೂ ಕೂಡ ಸಮಾನವಾಗಿ ಬದುಕು ಹಕ್ಕಿದೆ ಅನ್ನೋದನ್ನು ಈ ಕಥೆ ಹೇಳುತ್ತದೆ ಇಡೀ ನಾಟಕದ ಕೊನೆಯ ದೃಶ್ಯದ ವರೆಗೂ ಕೂಡ ಪ್ರತಿಯೊಬ್ಬ ಕಲಾವಿದನಲ್ಲಿರುವ ಎಲ್ಲ ನಟನಾ ಶಕ್ತಿ ಪರಿಪೂರ್ಣವಾಗಿ ಕಾಣುತ್ತದೆ.

ಕುಟುಂಬ ಸಮೇತರಾಗಿ ಒಟ್ಟಿಗೆ ಕುಳಿತು ನೋಡುವಂತಹ ಒಂದು ವಿಭಿನ್ನ ರೀತಿಯ ಕಥೆ. ಅದೇ ರೀತಿ ಇಡೀ ನಮ್ಮ ಸಮಾಜಕ್ಕೆ ಬೇಕಾಗುವ ಒಂದು ಒಳ್ಳೆಯ ಮೆಸೇಜ್ ಕೊಡುವವಂತಹ ಉತ್ತಮವಾದ ಕಥೆ. ಕಾಮಿಡಿ... ಸೆಂಟಿಮೆಂಟ್.... ಖಳನಾಯಕ... ಲೇಡಿ ಕ್ಯಾರೆಕ್ಟರ್ ಇವೆಲ್ಲವು ಕೂಡ ಒಂದು ನಾಟಕದಲ್ಲಿ ಹೇಗಿರಬೇಕು ಅನ್ನೋದನ್ನು... ಈ ಭರಣಿ ಕೃತಿಕೆ ನಾಟಕದಲ್ಲಿ ಅದ್ಭುತವಾಗಿ ತೋರಿಸಿದಾರೆ ಇಂತಹ ವಿಭಿನ್ನ ರೀತಿಯ ಹೊಸ ಪ್ರಯತ್ನದ ನಾಟಕಗಳಿಗೆ ಆದಷ್ಟು ಹೆಚ್ಚಿನ ಮಹತ್ವ ಕೊಟ್ಟು ಎಲ್ಲ ಕಡೆಗಳಲಿ ಕೂಡ ಅತಿ ಹೆಚ್ಚು ಪ್ರದರ್ಶನ ಕಾಣುವಂತೆ ನಾವೆಲ್ಲರೂ ಅವಕಾಶ  ಮಾಡಿ ಕೊಡೋಣ ಇಂತಹ ಕಥೆಗಳನ್ನು ಆದಷ್ಟು ನಮ್ಮ ಸಮಾಜದ ಮುಂದೆ ತಂದಾಗ ನಮ್ಮ ಮುಂದಿನ ಯುವ ಪೀಳಿಗೆಗೆ ಒಂದು ಒಳ್ಳೆಯ ಸಂದೇಶ ಸಿಗುತ್ತದೆ ಅದೇ ರೀತಿ ಪ್ರತಿಯೊಬ್ಬ ಕಲಾವಿದರಿಗೂ ಕೂಡ ನಟನೆಯ ಮೂಲಕ  ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಅನ್ನೋ  ಹುಮ್ಮಸ್ಸು ಹೆಚ್ಚುತ್ತದೆ.

Post a Comment

0 Comments