ನಿಯಮ ಉಲ್ಲಂಘಿಸಿರುವ ಶರೀಯತ್ ಕಾಲೇಜ್ ಬಗ್ಗೆ ಕ್ರಮಕೈಗೊಳ್ಳದ ಪುರಸಭೆ ವಿರುದ್ಧ ಹಿಂ.ಜಾ.ವೇ ಯಿಂದ ನಾಳೆ ಪ್ರತಿಭಟನೆ

ಜಾಹೀರಾತು/Advertisment
ಜಾಹೀರಾತು/Advertisment

 

  

ಮೂಡುಬಿದಿರೆ: ಮೂಡುಬಿದಿರೆ ಪ್ರಾಂತ್ಯ ಗ್ರಾಮದಲ್ಲಿ ಪುರಸಭೆ ಹಾಗೂ ಶಿಕ್ಷಣ ಇಲಾಖೆಯ ನಿಯಮ ಮೀರಿ ನಡೆಯುತ್ತಿರುವ ಕುರಾನಿಕ್ ಪ್ರೀ ಸ್ಕೂಲ್ ಮತ್ತು ಅಲ್ ಮಾಫಾಜ್ ವುಮೆನ್ಸ್ ಶರೀಯತ್ ಕಾಲೇಜ್ ವಿರುದ್ಧ  ಸೂಕ್ತ ಕ್ರಮ ಕೈಗೊಳ್ಳದ ಪುರಸಭೆಯ ವಿರುದ್ಧ ಹಿಂ.ಜಾ.ವೇ ನಾಳೆ  (ಗುರುವಾರ)ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. 

ಪುರಸಭೆಯಿಂದ ವಸತಿ ನಿರ್ಮಾಣಕ್ಕೆಂದು ಅನುಮತಿ ಪಡೆದು ಧಾರ್ಮಿಕ ಶಿಕ್ಷಣ ಸಂಸ್ಥೆಯನ್ನು  ನಡೆಸುತ್ತಿರುವ ಬಗ್ಗೆ ಹಿಂದು ಜಾಗರಣ ವೇದಿಕೆ ಈಗಾಗಲೇ ಪುರಸಭೆಗೆ ಮನವಿ ಸಲ್ಲಿಸಿದರೂ ಪುರಸಭೆಯು ಈವರೆಗೆ ಯಾವುದೇ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದೆ ಸಂಸ್ಥೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವುದಾಗಿ ಆರೋಪಿಸಿ ಪ್ರತಿಭಟನೆಗೆ ಮುಂದಾಗಿದೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಪುರಸಭೆಯ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ಜಾಗರಣದ ಮುಖಂಡ ಗಣರಾಜ ಭಟ್ ಕೆದಿಲ ಪ್ರಧಾನ ಭಾಷಣ ಮಾಡಲಿದ್ದಾರೆ.

Post a Comment

0 Comments