ಮೂಡುಬಿದಿರೆ: ಇಲ್ಲಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಬುಧವಾರದಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿವೃತ್ತ ಹೊಂದಿದ ಕ್ಲಕ್ ೯ ಶ್ರೀಧರ್ ಪುರಾಣಿಕ್ನ ನ ಲೈಂಗಿಕ ಕಿರುಕುಳವೇ ಕಾರಣವೆಂದು ತಿಳಿದು ಬಂದಿದ್ದು
ನಿವೃತ್ತ ಹೊಂದಿದ ಕ್ಲಕ್ ೯ ಶ್ರೀಧರ್ ಪುರಾಣಿಕ್ ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೈಲೂರು ಮೂಲದ, ಮೂಡುಬಿದಿರೆಯ ಖಾಸಗಿ ಪ.ಪೂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಂಗೀತಾ (17ವ) ಲೈಂಗಿಕ ಕಿರುಕುಳಕ್ಕೆ ಬಲಿಯಾದ ವಿದ್ಯಾರ್ಥಿನಿ.
ಸಂಗೀತಾ ಹೌದಾಲ್ ನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ಮಂಗಳವಾರದಂದು ಮಧ್ಯಾಹ್ನದ ವೇಳೆಗೆ ಕಿವಿ ನೋವೆಂದು ಕಾಲೇಜಿನಿಂದ ಮನೆಗೆ ಬರಲು ಹೊರಟಿದ್ದ ಆಕೆಯನ್ನು ಅದೇ ಕಾಲೇಜಿನ ನಿವೃತ್ತ ಹೊಂದಿದ ಕ್ಲಕ್ ೯ ಶ್ರೀಧರ್ ಪುರಾಣಿಕ್, ಕಾರಿನಲ್ಲಿ ಆಕೆಯನ್ನು ಮನೆಗೆ ಬಿಡಲು ಹೋದಾಗ ಕಾರಿನಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದಿರುವ ಆಕೆ ಬುಧವಾರ ಮನೆಯ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಮನೆಯವರ ಗಮನಕ್ಕೆ ಬಂದಿದೆ.
ತನಗೆ ಶ್ರೀಧರ್ ಪುರಾಣಿಕ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆಕೆ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆನ್ನಲಾಗಿದೆ.
ಪಣಂಬೂರು ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಶ್ರೀಧರ್ ಪುರಾಣಿಕ್ ನನ್ನು ಬಂಧಿಸಲಾಗಿದೆ.
0 Comments