ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಲಕ್ಷದೀಪೋತ್ಸವ ಪೂಜೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಭಾರತಿಯ ಜೈನ್ ಮಿಲನ್ ವಲಯ-8 ರ19ನೇ ವಲಯ ಸಮ್ಮೇಳನದ ಪ್ರಯುಕ್ತ ಜೈನ  ಕಾಶಿ ಮೂಡುಬಿದಿರೆ ಯ ಸಾವಿರ ಕಂಬದ ಬಸದಿ ಯಲ್ಲಿ ಶನಿವಾರ ರಾತ್ರಿ ಲಕ್ಷದೀಪೋತ್ಸವ ಪೂಜೆ ಹಾಗೂ ಮಕ್ಕಿಮನೆ ಕಲಾವೃಂದ ದಿಂದ   ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. 

ಮೂಡುಬಿದಿರೆ ಜೈನ ಮಠದ ಪರಮಪೂಜ್ಯ  ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಯವರು 

ಪಾವನ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. 

ನವದೆಹಲಿ ಭಾರತೀಯ ಜೈನ್ ಮಿಲನ್  ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ,ಮಾಜಿ ಸಚಿವ  ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ, ಪುಷ್ಪರಾಜ್ ಜೈನ್ ಮಂಗಳೂರು ಸಹಿತ ಮತ್ತಿತರ ಗಣ್ಯರು ಹಾಗೂ  ಊರ  - ಪರವೂರ  ಸಾವಿರಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

ವಕೀಲೆ ಶ್ವೇತಾ ಜೈನ್ ಮೂಡುಬಿದಿರೆ ನಿರೂಪಿಸಿದರು.

ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಸುದೇಶ್ ಜೈನ್ ಮಕ್ಕಿಮನೆ ಸಂಯೋಜಿಸಿದ್ದರು .

Post a Comment

0 Comments