ವಾಲ್ಪಾಡಿ : ಕುಮಾರ ಪಾತ್ರಿ ನಿಧನ

ಮೂಡುಬಿದಿರೆ: ಕಳೆದ 40 ವರ್ಷಗಳಿಂದ ಕುಮಾರ ದೈವ  ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ವಾಲ್ಪಾಡಿ ಕಜೆ ನಿವಾಸಿ ಕೃಷ್ಣಪ್ಪ ಮಡಿವಾಳ ಅವರು ಭಾನುವಾರ   ತನ್ನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಕೃಷ್ಣಪ್ಪ ಅವರು ತನ್ನ ತಂದೆ ಬಾಬು ಮಡಿವಾಳ ಅವರಿಂದ ದೈವದ ಚಾಕರಿಯನ್ನು ಕಲಿತಿದ್ದು ನಂತರ ಮರೋಡಿ ಉಮಾಮಹೇಶ್ವರಿ ದೇವಸ್ಥಾನ ಮತ್ತು ಕೊಕ್ರಾಡಿಯ ಅತ್ರಜಾಲ್  ನಲ್ಲಿ ಕುಮಾರ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು.

ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Post a Comment

0 Comments

Advertisement