ಬೆಳುವಾಯಿಯ ಖಲಂದರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಟ್ರಸ್ಟ್ ನ ಗೌರವಾಧ್ಯಕ್ಷರಾದ ಅಬ್ದುಲ್ ರಹಮಾನ್ ( ಮಾಸ್ಟರ್), ಬೆಳುವಾಯಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಗೋಳಾರ,ಬ್ಲಾಸಮ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯಸ್ಥ ಸೈಮನ್ ಮಸ್ಕರೇನಸ್ ಹಾಗೂ ದರೆಗುಡ್ಡೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ಚೌಟ ಅವರು ಸೇರಿ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.
ಅಬೂಬಕ್ಕರ್ ಸಿದ್ದೀಕ್ ಮಸೀದಿಯ ಅಧ್ಯಕ್ಷರಾದ ಅನ್ವರ್ ಅಬ್ದುಲ್ ಕರೀಮ್, ನೂರಾನಿ ಮಸೀದಿ ಅಧ್ಯಕ್ಷರಾದ ಹುಸೈನ್ ಸಾಹೇಬ್,ಪಾಲಡ್ಕ ಹೊಸಬೆಳಕು ಸಮಾಜಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೇಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಹರೀಶ್ ಪುನ್ಕೆದಡಿ,ಬಿ.ಸಿ.ಸಿ.ಬೆಳುವಾಯಿ ಯ ಉಪಾಧ್ಯಕ್ಷ ಸಿರಾಜ್,ಸಮಾಜ ಸೇವಕ ಅಬ್ದುಲ್ ಖಯ್ಯೂಮ್ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ ನ ಸದಸ್ಯರಾದ ಅಬ್ದುಲ್ ರಹಿಮಾನ್ ಸಾಣೂರು,ನಾಸಿರ್ ಹುಸೈನ್,ಫರ್ಹಾದ್,ಶಾಹಿದ್, ಬಶೀರ್,ಕಬೀರ್, ಇರ್ಫಾನ್,ಶಿಫಾನ್,ನುಹ್ಮಾನ್,ಅನಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಸುಲೈಮಾನ್ ಶೇಖ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಶೌಕತ್ ಆಲಿ ವಂದಿಸಿದರು.ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.


0 Comments