ಮೂಡುಬಿದಿರೆ: ನ್ಯಾಯಾಲಯಯದ ಆವರಣದಲ್ಲಿ ಪ್ರಥಮ ನ್ಯಾಯಿಕ ದಂಡಾಧಿಕಾರಿ ಮತ್ತು ಜೆ.ಎಂ.ಎಫ್.ಸಿ ನ್ಯಾಯಧೀಶೆ ಮಾಲಾ ಸಿ. ಧ್ವಜಾರೋಹಣ ನೆರವೇರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ದಿವಿಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಸ್ ಲೋಬೋ, ಹಿರಿಯ ವಕೀಲರಾದ ಎಂ.ಎಸ್ ಕೋಟ್ಯಾನ್, ಬಾಹುಬಲಿ ಪ್ರಸಾದ್, ಕೆ.ಆರ್ ಪಂಡಿತ್ ಸಹಿತ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೂಡುಬಿದಿರೆ ಪೊಲೀಸರು ಗೌರವ ರಕ್ಷೆ ಸಲ್ಲಿಸಿದ್ದರು. ಧ್ವಜಾರೋಹಣ ಬಳಿಕ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು.
0 Comments