ಕಲ್ಲಬೆಟ್ಟು : ಎಸ್ ಡಿಎಂಸಿ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಆಯ್ಕೆ

 

ಮೂಡುಬಿದಿರೆ: ಕಲ್ಲಬೆಟ್ಟು ಉನ್ನತೀಕರಿಸಿದ ಜಿ.ಪಂ.ಮಾ.ಹಿ.ಪ್ರಾ.ಶಾಲೆಯ ರಾಜ್ಯ ಶಾಲೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಕೆ.ಆಚಾರ್ಯ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ ಹುದ್ದೆಗೆ ದಿನೇಶ್ .ಕೆ ಆಚಾರ್ಯ ಮತ್ತು ಇಸ್ಮಾಯಿಲ್ ಅವರ ಹೆಸರು ಇದ್ದುದರಿಂದ ಚುನಾವಣೆ ನಡೆಸಲಾಯಿತು.

 ಇಸ್ಮಾಯಿಲ್ ಅವರು 14 ಮತಗಳನ್ನು ಪಡೆದರೆ, ದಿನೇಶ್ ಅವರು 36 ಮತಗಳನ್ನು ಪಡೆದರು.ಅಧಿಕ ಮತಗಳನ್ನು ಪಡೆದಿರುವ ದಿನೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

Post a Comment

0 Comments

Advertisement