ಮೂಡಬಿದಿರೆ: ನಗರದ ಹೊರವಲಯದ ಅಶ್ವತ್ಥಪುರಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.
ಶ್ರೀಕ್ಷೇತ್ರ ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀರಾಮ ನವಮಿ ಮಹೋತ್ಸವದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಇಂದು ಮುಂಜಾನೆ ರಾಮುಲು ಪಾಲ್ಗೊಂಡಿದ್ದರು.
ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ರಘುನಾಥ ಎಲ್.ವಿ. ಸಚಿವರನ್ನು ಗೌರವಿಸಿದರು. ಮೊತ್ತೇಸರರಾದ ಕಿರಣ್ ಮಂಜನಬೈಲು, ದತ್ತಾತ್ರೇಯ ಸುರಾಲು, ಬಿ. ರಂಗನಾಥ ಭಟ್ ಮೊದಲಾದವರಿದ್ದರು.
0 Comments