ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment


ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಕ್ಕೆಯಲ್ಲಿ ನಡೆಯುತ್ತಿರುವ ಭೂ ಸುಪೋಷನ್ ಎಂಬ ವಿಶೇಷ ವನಸಿರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುತ್ರಾನ್ಜೀವ ಎಂಬ ಸುಬ್ರಮಣ್ಯ ದೇವರಿಗೆ ಸಂಬಂಧ ಪಟ್ಟ ಮರವನ್ನು ನೆಟ್ಟು ದೇವಾಲಯದ ಆಡಳಿತ ಮಂಡಳಿಯ ಅಭಿಯಾನಕ್ಕೆ ಕೈಜೋಡಿಸಿದರು. ದೇವರ ದರ್ಶನ ಪಡೆದು ಮಹಾಪೂಜೆ, ಆಶ್ಲೇಷಾಬಲಿ ಪೂಜೆ ಹಾಗು ಆದಿ ಸುಬ್ರಹ್ಮಣ್ಯ ದೇವಾಲಯದಲ್ಲಿ  ವಸ್ತ್ರ ಸಮರ್ಪಣೆ ನೆರವೇರಿಸಿದರು. ದೇವಾಲಯದ  500ಕ್ಕೂ ಮಿಕ್ಕಿದ ನೌಕರರು  ಆಡಳಿತ ಮಂಡಳಿಯೊಂದಿಗೆ ಸೇರಿ ಪ್ರತಿ ಏಕಾದಶಿಯಂದು ನಡೆಯುವ  ಸ್ವಚ್ಛ ಮಂದಿರ ಸೇವಾ ಅಭಿಯಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೂ ಪ್ರತಿಯೊಂದು ದೇವಾಲಯಗಳೂ  ಕೂಡ ಇಂತಹಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಇಲ್ಲಿ ಬರುವ ಭಕ್ತಾದಿಗಳು ಆದಷ್ಟು ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡಬೇಕು, ಇದು ವಿವಿಧ ನಾಗ ಸಂಚಾರದ ಕ್ಷೆತ್ರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದಲ್ಲಿ ಬಿಸಾಡಿ ಅವುಗಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು. 


ನಂತರ ದೇವಾಲಯದ ಮಾಸ್ಟರ್ ಪ್ಲಾನಿನಲ್ಲಿ ತೆಗೆದುಕೊಳ್ಳಲು ನಿರ್ಣಯಿಸಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದು ನಾನು ನಿಮ್ಮೊಂದಿಗೆ ಜೊತೆಗೂಡುವುದರೊಂದಿಗೆ ದೇವಾಲಯದ ಪಾವಿತ್ರತೆ ಹಾಗು ಪರಂಪರೆಯನ್ನು ಮುಂದುವರಿಸೋಣ ಎಂದರು. ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು ಪವನ್ ಕಲ್ಯಾಣ್ ರವರಿಗೆ ಸಾಥ್ ಕೊಟ್ಟರು.

Post a Comment

0 Comments