ಮೂಡುಬಿದಿರೆ : ಎರಡು ದಿನಗಳ ಹಿಂದೆ ಮಡಂತ್ಯಾರಿನಲ್ಲಿ ನಡೆದ ಜೆಸಿಐ ವಲಯ 15 ರ ಸಮಾವೇಶದಲ್ಲಿ ವ್ಯವಹಾರ ಕ್ಷೇತ್ರದಲ್ಲಿ 2026 ನೇ ಸಾಲಿನಲ್ಲಿ ಸಾಧನೆ ಮಾಡಿರುವ ವಲಯದ ಪ್ರತಿಷ್ಠಿತ ‘ಸಾಧನಾಶ್ರೀ’ ಪ್ರಶಸ್ತಿಯನ್ನು ಜೆಸಿಐ ಮೂಡುಬಿದಿರೆ ತ್ರಿಭುವನ್ ಘಟಕದ ಪೂರ್ವಾಧ್ಯಕ್ಷರೂ, ಮೂಡುಬಿದಿರೆ ನ್ಯೂ ದುರ್ಗಾ ಡಿಜಿಟಲ್ಸ್ ನ ಮಾಲಕರು ಆಗಿರುವ ಸಂತೋಷ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಈ ಸಂದಭ೯ದಲ್ಲಿ ವಲಯದ ಪದಾಧಿಕಾರಿಗಳು, ಮೂಡುಬಿದಿರೆ ಜೆಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

0 Comments