ಪಿ. ಶ್ರೀಧರ್ ಅವರು ಡಿಎಫ್ ಒ ಆಗಿ ಪದೋನ್ನತಿ, ಮೂಡುಬಿದಿರೆಗೆ ನೂತನ ಎಸಿಎಫ್ ಆಗಿ ಆಕಾಶ್ ಧನಾಜಿ ಕದಮ್
ಮೂಡುಬಿದಿರೆ ಉಪವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಿ.ಶ್ರೀಧರ್ ಅವರು ಸೇವೆಯಲ್ಲಿ ಡಿಎಫ್ಒ ಆಗಿ ಪದೋನ್ನತಿ ಹೊಂದಿದ್ದಾರೆ.
ಮೂಡುಬಿದಿರೆಗೆ ನೂತನ ಎಸಿಎಫ್ ಆಗಿ ಆಕಾಶ್ ಧನಾಜಿ ಕದಮ್ (IFS) ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ಮಹಾರಷ್ಡ್ರದವರಾಗಿರುವ ಕದಮ್ ಅವರು ಶಿವಮೊಗ್ಗದಲ್ಲಿ ಎಸಿಎಫ್ ಆಗಿ ಸೇವೆ ಸಲ್ಲಿಸಿದ್ದರು.
ಪಿ. ಶ್ರೀಧರ್ ಅವರು ಮಂಗಳೂರು,ಮೂಡುಬಿದಿರೆಯಲ್ಲಿ ಎಸಿಎಫ್ ಆಗಿ ಸೇವೆ ಸಲ್ಲಿಸಿರುವ ಸಂದಭ೯ದಲ್ಲಿ ಹಲವಾರು ಅರಣ್ಯ ಕಾರ್ಯಕ್ರಮಗಳನ್ನು, ನೂತನ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪ್ರಿಯರಾಗಿದ್ದರು.

0 Comments