ಮೂಡುಬಿದಿರೆ: ಈದ್ ಮಿಲಾದುನ್ನಬಿ ಪ್ರಯುಕ್ತ ಪಡುಮಾರ್ನಾಡು ಗ್ರಾಮ ವ್ಯಾಪ್ತಿಯ ಕಾಯರ್ಕಟ್ಟೆ ಗುಂಡುಕಲ್ಲಿನ ಮುಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ದಾರುಲ್ ಉಲೂಮ್ ಮದರಸ ವತಿಯಿಂದ ‘ಹಾದಿ ಮದೀನಾ ಮಿಲಾದ್ ರ್ಯಾಲಿ’ ನಡೆಯಿತು.
ರ್ಯಾಲಿಯಲ್ಲಿ ಮದರಸ ವಿದ್ಯಾರ್ಥಿಗಳು, ಮಸೀದಿ ಹಾಗೂ ಮದರಸ ಆಡಳಿತ ಮಂಡಳಿಯ ಪದಾಧಿಕಾರಿಗಳು, ಧರ್ಮಗುರುಗಳು, ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

0 Comments