ರೈಲಿನಿಂದ ಎಸೆಯಲ್ಪಟ್ಟು ಕಾಂಗ್ರೆಸ್ ಮುಖಂಡನ ಪುತ್ರನ ಸಾವು
ಮೂಡುಬಿದಿರೆ : ಮುಂಬೈ ಯಲ್ಲಿ ರೈಲಿನಿಂದ ಎಸೆಯಲ್ಪಟ್ಟು ಮೂಡುಬಿದಿರೆಯ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಮುಖಂಡರಾಗಿದ್ದ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಶಶಿ ಕೋಟ್ಯಾನ್ ಸಾವನ್ನಪ್ಪಿದ ಯುವಕ.
ಶಶಿ ಮುಂಬೈನಲ್ಲಿ ಉದ್ಯೋಗದಲ್ಲಿದ್ದು ಅವರು ಸೋಮವಾರ ರೈಲಿನಿಂದೆಸೆಯಲ್ಪಟ್ಟು ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು ಆತನ ಸಂಬಂಧಿಕರು ಮುಂಬೈಗೆ ತೆರಳುತ್ತಿದ್ದು ಸತ್ಯ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.
0 Comments