ಎರಡು ಹಸುಗಳನ್ನು ಬಲಿ ತೆಗೆದುಕೊಂಡ ವಿದ್ಯುತ್ ತಂತಿ
ಮೂಡುಬಿದಿರೆ : ಪಡುಮಾನಾ೯ಡು ಗ್ರಾ. ಪಂ. ವ್ಯಾಪ್ತಿಯ ಕೊಪ್ಪಳದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಎರಡು ಹಸುಗಳನ್ನು ಬಲಿ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.
ತೋಮರ ಎಂಬವರಿಗೆ ಸೇರಿದ 7 ವಷ೯ದ ದನ ಮತ್ತು ಸುರೇಂದ್ರ ಹೆಗ್ಡೆ ಎಂಬವರಿಗೆ 9 ವಷ೯ದ ದನ ಪ್ರಾಣ ಕಳಕೊಂಡವು.
ಗದ್ದೆಯಲ್ಲಿ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯ ಬಳಿ ಹಸುಗಳು ಮೇಯುತ್ತಾ ಹೋಗಿದ್ದು ಅಲ್ಲಿ ವಿದ್ಯುತ್ ಸ್ಪರ್ಶಿಸಿದಾಗ ಬೊಬ್ಬೆ ಹೊಡೆದಿರುವುದರಿಂದ ಪ್ರಕರಣ ಬೆಳಕಿಗೆ ಬಂತು. ಇಲ್ಲೇ ಎರಡು ಉಡ, ಸುಮಾರು ಹತ್ತು ಕೇರೆ ಹಾವುಗಳು ಕೂಡ ಈ ಜಾಗದಲ್ಲಿ ಸತ್ತ ಸ್ಥಿತಿಯಲ್ಲಿ ಕಂಡು ಬಂದಿದೆ.
ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ, ಸದಸ್ಯರಾದ ಮಹಮ್ಮದ್ ಅಸ್ಲಾಂ, ತೆಸ್ಲೀನಾ ರೊಡ್ರಿಗಸ್, ರಮೇಶ ಶೆಟ್ಟಿ, ಸಹಾಯಕ ನಿದೇ೯ಶಕರು (ಪ್ರಭಾರ) ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ, ಪಶುವೈದ್ಯಾಧಿಕಾರಿ ಗುರುರಾಜ್, ಶಾಖಾಧಿಕಾರಿ ಜಿ. ಎಂ. ನಾಯ್ಕ್, ಗ್ರಾಮಕರಣಿಕೆ ಉಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಂಚಾಯತ್ ಸಿಬಂಧಿ ಕಿಶೋರ್ ಕುಮಾರ್ ಈ ಸಂದಭ೯ದಲ್ಲಿದ್ದರು.
0 Comments