ಹಿಂದಿ ಎಂ.ಎಯಲ್ಲಿ ಪ್ರಥಮ ರ‍್ಯಾಂಕ್


 ಹಿಂದಿ ಎಂ.ಎಯಲ್ಲಿ ಪ್ರಥಮ ರ‍್ಯಾಂಕ್


ಮೂಡುಬಿದಿರೆ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕಳೆದ ಮಾರ್ಚ್ನಲ್ಲಿ ನಡೆಸಿದ ಹಿಂದಿ ಎಂ.ಎ ಪರೀಕ್ಷೆಯಲ್ಲಿ ಮೂಡುಬಿದಿರೆ ಕೊಡಂಗಲ್ಲು ಕವಿತಾ ರಾಣೆಯರ್ ಪ್ರಥಮ ರ‍್ಯಾಂಕ್‌ನೊAದಿಗೆ ಚಿನ್ನದ ಪದಕವನ್ನು ಗಳಿಸಿದ್ದಾರೆ. ಇತ್ತೀಚೆಗೆ ನಡೆದ ವಿವಿಯ ಘಟಿಕೋತ್ಸವದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ನಡೆಸಿದರು. ಇವರು ಕೊಡಂಗಲ್ಲು ದಿ. ರಾಘು ರಾಣೆಯರ್, ವಸಂತಿ ದಂಪತಿಯ ಪುತ್ರಿಯಾಗಿದ್ದು ಪ್ರಸ್ತುತ ಪುತ್ತೂರು ದೂಮಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Post a Comment

0 Comments

Advertisement