"ಕಾರ್ಕಳ ಹಿರಿಯಂಗಡಿ ರಥೋತ್ಸವ ಸಂಪನ್ನ"
ಇಲ್ಲಿನ ಹಿರಿಯಂಗಡಿ ಯ ಇತಿಹಾಸ ಪ್ರಸಿದ್ಧ ಹಲ್ಲರ ಬಸದಿಯ ರಥೋತ್ಸವ ಹಾಗೂ ಸಮಾವಸರಣ ಪೂಜೆಗಳು ನಡೆದವು .ಶ್ರೀ ನೇಮಿನಾಥ ತೀರ್ಥಂಕರ ,ಶ್ರೀ ಪಾರ್ಶ್ವನಾಥ ತೀರ್ಥಂಕರ ಹಾಗೂ ಚತುರ್ವಿಶ ತೀರ್ಥಂಕರ ,ಮಾತೆ ಪದ್ಮಾವತಿಗೆ ವಿಶೇಷ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು .ಕಾರ್ಕಳ ,ಮೂಡುಬಿದರೆ ,ಕಳಸ ಸೇರಿದಂತೆ, ನಾಡಿನ ವಿವಿಧಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಜಯಶ್ರೀ ಹೊರನಾಡು ಅವರ ಸಂಗೀತ ಹೊಸ ಮೆರುಗು ನೀಡಿತು.
ವರದಿ ; ಜೆ ರಂಗನಾಥ ತುಮಕೂರು
0 Comments