ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ

ಜಾಹೀರಾತು/Advertisment
ಜಾಹೀರಾತು/Advertisment

 ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ

ಮೂಡುಬಿದಿರೆ: ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ  ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳವಾರ ಕನ್ನಡಭವನದಲ್ಲಿ ನಡೆಯಿತು.

 ನೂತನ ಅಧ್ಯಕ್ಷ ದಿನೇಶ್ ಪುತ್ರನ್ ಹಾಗೂ ಪದಾಧಿಕಾರಿಗಳಿಗೆ ಮಾಜಿ ಅಧ್ಯಕ್ಷ ಸುನೀಲ್ ಆಳ್ವ ಧ್ವಜವನ್ನು ಹಸ್ತಾಂತರಿಸುವ ಮೂಲಕ ಪದಗ್ರಹಣಗೈದರು.  


ಶಾಸಕ  ಉಮಾನಾಥ್ ಎ. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಿರ್ಗಮನ ಅಧ್ಯಕ್ಷ ಸುನಿಲ್ ಆಳ್ವ, ಪ್ರ.ಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್ ಮತ್ತು ಕೇಶವ ಬಿ.ಕರ್ಕೇರಾ ಅವರನ್ನು ಗೌರವಿಸಿದರು.


ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ,  ಜಿಲ್ಲಾ ಬಿಜೆಪಿ ಉಪಾಧ್ಯಕ್ಷರುಗಳಾದ ಸುನಿಲ್ ಆಳ್ವ, ಶಾಂತಿ ಪ್ರಸಾದ್ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಕಿಶೋ‌ರ್ ಕುಮಾರ್ ಬೊಟ್ಯಾಡಿ, ಮಂಡಲ ಉಸ್ತುವಾರಿ ಜಯಂತ್ ಕೋಟ್ಯಾನ್, ಚುನಾವಣಾ ಸಂಚಾಲಕ ಚಂದ್ರಶೇಖರ ರಾವ್‌, ಜಿಲ್ಲಾ ಕಾರ್ಯದರ್ಶಿ ಕವಿತ ದಿನೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್‌ ಮಲ್ಯ, ಜಿಲ್ಲಾ ಎಸ್. ಸಿ ಮೋರ್ಚಾ ಅಧ್ಯಕ್ಷ ಜಗನ್ನಾಥ ಬೆಳುವಾಯಿ, ಪ್ರಮುಖರಾದ ಕೆ.ಆ‌ರ್ ಪಂಡಿತ್‌,ಬಾಹುಬಲಿ ಪ್ರಸಾದ್, ಕೃಷ್ಣರಾಜ ಹೆಗ್ಡೆ,ಭುವನಭಿರಾಮ ಉಡುಪ, ರಮಾನಾಥ ಅತ್ತಾ‌ರ್, ಈಶ್ವ‌ರ್ ಕಟೀಲ್‌, ಕಸ್ತೂರಿ ಪಂಜ,ಮೇಘನಾಥ ಶೆಟ್ಟಿ,ರಘುರಾಮ್ ಪುನರೂರು ಮಂಡಲ ಪ್ರಧಾನ ಪುನರೂರು ಮಂಡಲ ಪ್ರಧಾನ

ಕಾರ್ಯದರ್ಶಿಗಳಾದ ರಂಜಿತ್

ಪೂಜಾರಿ, ಹರಿಪ್ರಸಾದ್‌ ಶೆಟ್ಟಿ,

ಮಂಡಲ ಉಪಾಧ್ಯಕ್ಷರುಗಳಾದ

ಸುಕೇಶ್‌ ಶೆಟ್ಟಿ ಶಿರ್ತಾಡಿ, ವಿನೋದ್

ಬೊಳ್ಳೂರು, ರಂಗನಾಥ್ ಶೆಟ್ಟಿ, ಕೇಶವ ಬಿ.ಕರ್ಕೇರ, ಸುಮಾ ಶೆಟ್ಟಿ, ಸೂರಜ್ ಜೈನ್‌, ಕಾರ್ಯದರ್ಶಿಗಳಾದ ಸುಭಾಸ್

ಶೆಟ್ಟಿ, ಸಾತ್ವಿಕ್ ಮಲ್ಯ, ಮಮತಾ

ದಿವಾಕ‌ರ್ ಪೂಂಜಾ, ಗಣೀಶ್

ಬಿ ಅಳಿಯೂರು, ಪ್ರೇಮನಾಥ್

ಶೆಟ್ಟಿ, ಪೂರ್ಣಿಮಾ ಹಳೆಯಂಗಡಿ,

ಪ್ರಭಾಕ‌ರ್ ಕುಲಾಲ್ ಪಳಕಳ,

ವಿದ್ಯಾನಂದ ಶೆಟ್ಟಿ ಹಾಗೂ ವಿವಿಧ

ಮೋರ್ಚಾ ಹಾಗೂ ಪ್ರಕೋಷ್ಠಗಳ

ಪದಾಧಿಕಾರಿಗಳು, ಕಾರ್ಯಕರ್ತರು

ಉಪಸ್ಥಿತರಿದ್ದರು.

 ವಾಲ್ಪಾಡಿ ಗ್ರಾ.ಪಂ.ಉಪಾಧ್ಯಕ್ಷ  ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments